Neer Dose Karnataka
Take a fresh look at your lifestyle.

Kannada News: ವಿಷ್ಣು ಸರ್ ಚಿತ್ರದಿಂದ ನನಗೆ ಶಾಕ್ ಆಯ್ತು: ಪೊಲೀಸ್ ಸ್ಟೋರಿ ಮೂಲಕ ಅಡ್ಡಗಾಲು ಹಾಕಿದ್ದೆಗೆ ಗೊತ್ತೇ?? ಅಭಿಜಿತ್ ಇಷ್ಟು ವರ್ಷ ಆದಮೇಲೆ ಹೇಳಿದ್ದೇನು ಗೊತ್ತೇ??

Kannada News: ನಟ ಅಭಿಜಿತ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮೊದಲಿಗೆ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಅಭಿಜಿತ್ ಅವರು, ನಂತರ ನಾಯಕನಾಗಿ ಹಾಗೂ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಸಹ ನಟಿಸಿದ್ದಾರೆ. ಆದರೆ ಸ್ವಲ್ಪ ಸಮಯದ ನಂತರ ಅಭಿಜಿತ್ ಅವರಿಗೆ ಒಳ್ಳೆಯ ಪಾತ್ರಗಳು ಸಿಗದೆ, ಸಿನಿಮಾ ನಿರ್ಮಾಣ ಮಾಡಿ ಕೈ ಸುಟ್ಟುಕೊಂಡು ಚಿತ್ರರಂಗದಿಂದಲೇ ದೂರ ಉಳಿದರು. ಈಗ ಕಿರುತೆರೆಯ ಮೂಲಕ ಮತ್ತೆ ನಟನೆಗೆ ಬಂದಿದ್ದಾರೆ. ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ತಮ್ಮ ಕೆರಿಯರ್ ಬಗ್ಗೆ ಹಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ..

ಪೊಲೀಸ್ ಸ್ಟೋರಿ ಸಿನಿಮಾ ಮೊದಲಿಗೆ ಅಭಿಜಿತ್ ಅವರು ಮಾಡಬೇಕಿತ್ತಂತೆ. ಆದರೆ ಆ ಸಮಯದಲ್ಲಿ ಬಜೆಟ್ ಹೊಂದಿಸಲು ಸಾಧ್ಯವಾಗದ ಕಾರಣ ಆ ಸಿನಿಮಾ ಸಾಯಿಕುಮಾರ್ ಅವರ ಪಾಲಾಯಿತು ಎಂದಿದ್ದಾರೆ. ಪೊಲೀಸ್ ಸ್ಟೋರಿ ಸಿನಿಮಾ ಕಥೆಯನ್ನು ಥ್ರಿಲ್ಲರ್ ಮಂಜು ಅವರ ಜೊತೆ ಸೇರಿ ತಾವೇ ಕೂತು ಕಥೆ ಮಾಡಿದ್ದರಂತೆ. ಅಭಿಜಿತ್ ಅವರಿಗೆ ಸಿನಿಮಾದಲ್ಲಿ ಆಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳಬೇಕು ಎಂದು ಆಸೆ ಇತ್ತಂತೆ. ಆದರೆ ಅದು ನೆರವೇರಿಲ್ಲ. 2002ರ ನಂತರ ಸಿನಿಮಾ ಆಫರ್ ಗಳು ಕಡಿಮೆ ಆದಾಗ, ಸಿನಿಮಾಗಳನ್ನು ನಿರ್ಮಾಣ ಮಾಡಿ, ನಟಿಸಿ ಕೈಸುಟ್ಟುಕೊಂಡಿದ್ದಾರೆ. ಸೋಲು ಕಂಡಾಗ, ಅಭಿಜಿತ್ ಅವರ ಪತ್ನಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಬಳಿ ಮಾತನಾಡಿ, ತಮ್ಮ ಬ್ಯಾನರ್ ನಲ್ಲಿ ಒಂದು ಸಿನಿಮಾ ಮಾಡಿ ಎಂದು ಕೇಳಿ,ವಿಷ್ಣುವರ್ಧನ್ ಅವರು ಕೂಡ ಒಪ್ಪಿಗೆ ಕೊಟ್ಟಿದ್ದರಂತೆ. ಇದನ್ನು ಓದಿ..Kannada News: ದಿಡೀರ್ ಎಂದು ಸರಿಹೋದ ದರ್ಶನ್ ಕೂದಲು: ವಿಗ್ ಹಾಕಿ ಬಂದ್ರ ಅಥವಾ ಕಸಿ ಮಾಡಿಸಿಕೊಂಡು ಬಿಟ್ರಾ??

ಆದರೆ ಆ ಸಿನಿಮಾ ಸೆಟ್ಟೇರುವ ಮೊದಲೇ ವಿಷ್ಣುವರ್ಧನ್ ಅವರು ವಿಧಿವಶರಾಗಿದ್ದರು. ಆ ಸಮಯದಲ್ಲಿ ಅಭಿಜಿತ್ ಅವರು ವಿಷ್ಣು ಎನ್ನುವ ಟೈಟಲ್ ಅನ್ನು ಕೂಡ ರಿಜಿಸ್ಟರ್ ಮಾಡಿಸಿದ್ದರಂತೆ. ಆದರೆ ವಿಷ್ಣುವರ್ಧನ ಎನ್ನುವ ಟೈಟಲ್ ನಲ್ಲಿ ದ್ವಾರಕೀಶ್ ಅವರು ಸಿನಿಮಾ ಮಾಡಲು ಶುರು ಮಾಡಿದಾಗ, ಇವರ ಟೈಟಲ್ ಗೆ ತೊಂದರೆ ಆಗಿ, ಅಭಿಜಿತ್ ಅವರು ಮೂರು ತಿಂಗಳ ಒಳಗೆ ಸಿನಿಮಾ ಮಾಡಬೇಕು ಎಂದು ಹೇಳಿದ್ದರಂತೆ. ಆಗ ವಿಷ್ಣು ಸಿನಿಮಾ ನಿರ್ಮಾಣ ಮಾಡಿ ನಟಿಸಿ, ಅದು ಹೆಚ್ಚು ಖರ್ಚಾಗಿ, ಎಲ್ಲಾ ದುಡ್ಡನ್ನು ಕಳೆದುಕೊಂಡು, ಕೊನೆಗೆ ಆ ಸಾಲದಿಂದ ಹೊರಬರಲು ಅಭಿಜಿತ್ ಅವರಿಗೆ 8 ವರ್ಷಗಳು ಬೇಕಾಯಿತಂತೆ. ತಮ್ಮ ಕೆರಿಯರ್ ನಲ್ಲಿ ಆದ ಏಳುಬೀಳುಗಳ ಬಗ್ಗೆ ಹೀಗೆ ಹೇಳಿದ್ದಾರೆ ನಟ ಅಭಿಜಿತ್. ಇದನ್ನು ಓದಿ.. Biggboss Kannada: ಅಸಲಿಗೆ ಎಲ್ಲರ ಮನಗೆದ್ದಿದ್ದ ಅಮಾಯಕ ಹುಡುಗಿ ಅಮೂಲ್ಯ ರವರಿಗಿಂತ ಮೊದಲು ಹೊರಬರಬೇಕಾದದ್ದು ಯಾರು ಗೊತ್ತೇ??

Comments are closed.