Neer Dose Karnataka
Take a fresh look at your lifestyle.

Kannada News: ಶುರುವಾಯಿತು ಬಹಿರಂಗ ವಾರ್: ಮತ್ತೊಂದು ಎಡವಟ್ಟು ಮಾಡಿಕೊಂಡ ಡಿ ಬಾಸ್: ಅಪ್ಪು ಫ್ಯಾನ್ಸ್ ಈ ಬಾರಿ ಕೊಟ್ಟ ಎಚ್ಚರಿಕೆ ಏನು ಗೊತ್ತೇ?

Kannada News: ನಟ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ನಡೆದ ಘಟನೆ ಅವರ ಎಲ್ಲಾ ಅಭಿಮಾನಿಗಳಿಗು ಬೇಸರ ಉಂಟು ಮಾಡಿತ್ತು, ಇದರಿಂದಾಗಿ ಡಿಬಾಸ್ ಅವರ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರು ಮತ್ತು ದೊಡ್ಮನೆಯ ಕುಟುಂಬದ ಬಗ್ಗೆ ಕೆಟ್ಟ ಪದಗಳನ್ನು ಬಳಸಿ, ನಿಂದನೆ ಮಾಡುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪೋಸ್ಟ್ ಗಳು ಸಹ ಬಂದಿತ್ತು. ಇದರ ಬಗ್ಗೆ ಈಗ ದೊಡ್ಮನೆ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಬೃಹತ್ ಸಭೆ ನಡೆಸಿ, ದೊಡ್ಮನೆ ವಿರುದ್ಧ ಅಂತಹ ಪದಗಳನ್ನು ಬಳಕೆ ಮಾಡಿದ ವ್ಯಕ್ತಿಗಳ ಮೇಲೆ, ಕ್ರಿಮಿನಲ್ ಕೇಸ್ ಸಹ ಹಾಕಿದ್ದಾರೆ. ಅಷ್ಟೇ ಅಲ್ಲದೆ, ದರ್ಶನ್ ಅವರು ಹುಬ್ಬಳ್ಳಿಯಲ್ಲಿ ನೀಡಿದ ಹೇಳಿಕೆಗೆ ಪ್ರತ್ಯುತ್ತರ ಕೂಡ ನೀಡಿದ್ದಾರೆ.

ದೊಡ್ಮನೆ ಅಭಿಮಾನಿ ಹೇಳಿದ್ದು ಹೀಗೆ.. “ನಮ್ಮ ಮೇಲೆ ನೀವು ಎಷ್ಟೇ ಆಪಾದನೆ ಮಾಡಿ, ಸುಳ್ಳು ಹೇಳಿ ನಾವು ಬೇಜಾರ್ ಮಾಡ್ಕೊಳಲ್ಲ, ತಲೆ ಕೆಡ್ಸ್ಕೊಳಲ್ಲ, ಭಯ ಪಡಲ್ಲ. ನಾವು ತಲೆ ಎತ್ತಿಕೊಂಡು ಓಡಾಡ್ತಿವಿ. ಯಾಕಂದ್ರೆ, ಅಣ್ಣಾವ್ರು ಮತ್ತು ಅಪ್ಪು ಅವರು ಅಷ್ಟು ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ. ಅಪ್ಪು ಅಭಿಮಾನಿಗಳು ಕೆಟ್ಟ ಕೆಲಸಗಳನ್ನ ಈ ಹಿಂದೆ ಮಾಡಿಲ್ಲ, ಮುಂದೆ ಕೂಡ ಮಾಡಲ್ಲ. ಒಳ್ಳೇದು ಮಾಡಿ ಅಂತ ನಮ್ ಬಾಸ್ ಹೇಳಿ ಹೋಗಿದ್ದಾರೆ. ನಾವು ಅದನ್ನೇ ಮಾಡ್ತಿದ್ದೀವಿ..ಉರಿಸಬೇಕು ಅನ್ನೋದು ಇದ್ರೆ. ಒಳ್ಳೆ ಕೆಲಸಗಳನ್ನ ಮಾಡಿ ಉರಿಸುತ್ತೀವಿ..ಒಬ್ಬ ನಟನ ಮೇಲೆ ದಾಳಿ ಆಗುತ್ತೆ ಅಂತ, ಎಲ್ಲರೂ ಅವರ ಪರ ನಿಂತುಕೊಳ್ತಾರೆ. ಆದರೆ, ಅಣ್ಣಾವ್ರು ಮತ್ತು ಅಪ್ಪು ಅವರ ಮೇಲೆ ಮಾನಸಿಕವಾಗಿ ದಾಳಿ ಮಾಡ್ತಾ ಇದ್ದಾರೆ, ಅದರ ಬಗ್ಗೆ ಯಾರು ಮಾತಾಡ್ತಾ ಇಲ್ಲ. ಕೆಲವು ಕಲಾವಿದರು ಮಾತ್ರ ಅಪ್ಪು ಪರವಾಗಿ ನಿಂತಿದ್ದಾರೆ. ಇದನ್ನು ಓದಿ..Kannada News: ತುಂಡುಡುಗೆ ತೊಟ್ಟು ಪಾರ್ಟಿ ಗೆ ಬಂದ ಪೂಜಾ ಹೆಗ್ಡೆ. ಕೊನೆಗೆ ತಪ್ಪು ಅರಿತು ಮುಜುಗರ ಪಟ್ಟುಕೊಂಡ ವಿಡಿಯೋ ವೈರಲ್.

ಅಣ್ಣಾವ್ರದ್ದು ಮತ್ತು ಅಪ್ಪು ಸರ್ ಅವರದ್ದು ಇಲ್ಲಿ ಏನು ಕೊಡುಗೆ ಇಲ್ವಾ.. ಬೇರೆ ಕಲಾವಿದರಿಗೆ ಭಯವೇ,? ಕರ್ನಾಟಕದ ಅತ್ಯುತ್ತನ ಪ್ರಶಸ್ತಿ ಕರ್ನಾಟಕ ರತ್ನ, ಅದನ್ನ ಅಪ್ಪ ಮಗ ಇಬ್ಬರಿಗು ಕೊಟ್ಟಿದ್ದಾರೆ. ಇಂತ ಶ್ರೇಷ್ಠ ಕುಟುಂಬದ ಬಗ್ಗೆ ಮಾತಾಡ್ತೀರಾ? ನಿಮಗೆ ನೈತಿಕತೆ ಇದೆಯಾ? ಕನ್ನಡ ಅಂದ್ರೆ ಅಣ್ಣಾವ್ರು, ಅಣ್ಣಾವ್ರು ಅಂದ್ರೆ ಕನ್ನಡ. ಸೋಷಿಯಲ್ ಮೀಡಿಯಾದಲ್ಲಿ ಅವರ ನಿಜವಾದ ಐಡೆಂಟಿಟಿ ತೋರಿಸದೆ ಕೆಟ್ಟ ಮಾತುಗಳನ್ನಾಡುತ್ತಿದ್ದಾರೆ, ಅವರ ಕುರಿತಾಗಿ ಈಗಾಗಲೇ, ಕರ್ನಾಟಕದ 73 ಪೊಲೀಸ್ ಸ್ಟೇಶನ್ ಗಳಲ್ಲಿ 1090ಕ್ಕಿಂತ ಹೆಚ್ಚು ಕ್ರಿಮಿನಲ್ ಕೇಸ್ ಗಳು ದಾಖಲಾಗಿದೆ..ಜನವರಿ 2ರಿಂದ ಬೆಂಗಳೂರು, ಮಂಗಳೂರು ಮತ್ತು ಮೈಸೂರು ಕೋರ್ಟ್ ಗಳು 17 ಮಾನನಷ್ಟ ಮೊಕಾದ್ದಮೆ ಕೇಸ್ ದಾಖಲೆ ಮಾಡಲಿದೆ..ಒಬ್ಬೊಬ್ಬರ ಮೇಲೆ ಕಡಿಮೆ ಎಂದರು 50 ಕೇಸ್ ಗಳು ದಾಖಲಾಗಿದೆ. ಅವರ ಬಳಿ 5 ಲಕ್ಷ ಪರಿಹಾರ ಕೇಳುತ್ತೇವೆ..” ಎಂದಿದ್ದಾರೆ ದೊಡ್ಮನೆ ಅಭಿಮಾನಿಗಳು. ಇದನ್ನು ಓದಿ.. Kannada News: ದೇಶವೇ ಮೆಚ್ಚಿರುವ ಜೋಡಿ, ಅಲ್ಲೂ ಅರ್ಜುನ್ ರವರು ತಮ್ಮ ಪತ್ನಿ ಸ್ನೇಹ ರವರು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತೇ? ಇಷ್ಟೆಲ್ಲ ಬೇಕಾ??

Comments are closed.