Neer Dose Karnataka
Take a fresh look at your lifestyle.

Biggboss Kannada: ಬಿಗ್ ನ್ಯೂಸ್: ಬಿಗ್ ಬಾಸ್ ನಲ್ಲಿ ನಡೆಯಿತೇ ಮಹಾಮೋಸ: ನಿಜಕ್ಕೂ ಗೆಲ್ಲಬೇಕಾದವರು ಯಾರು ಅಂತೇ ಗೊತ್ತೇ??

Biggboss Kannada: ಬಿಗ್ ಬಾಸ್ ಕನ್ನಡ ಸೀಸನ್ 9 ಫಿನಾಲೆ ನಿನ್ನೆಯಷ್ಟೇ ಮುಕ್ತಾಯವಾಗಿದೆ. ಓಟಿಟಿ ಸೀಸನ್ ಇಂದ ಶುರುವಾಗಿ, ಸುಮಾರು 142 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ವಾಸ ಮಾಡಿ, ಮನೆಯ ಕ್ಯಾಪ್ಟನ್ ಆಗಿ, ಕಿಚ್ಚನ ಮೆಚ್ಚುಗೆ ಚಪ್ಪಾಳೆ ಪಡೆದು, ವಾರದ ಅತ್ಯುತ್ತಮವನ್ನು ಪಡೆದಿದ್ದ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 9ರ ವಿನ್ನರ್ ಆಗಿದ್ದಾರೆ. ರೂಪೇಶ್ ಶೆಟ್ಟಿ ಅವರಿಗೆ ಅತಿಹೆಚ್ಚು ವೋಟ್ಸ್ ಬಿದ್ದು ವಿನ್ನರ್ ಆಗಿದ್ದು, 60 ಲಕ್ಷ ಬಹುಮಾನ ಕೂಡ ಪಡೆದಿದ್ದಾರೆ.

ಆದರೆ ಸೋಷಿಯಲ್ ಮೀಡಿಯಾದಲ್ಲಿ ಬೇರೆಯದೇ ಚರ್ಚೆ ನಡೆಯುತ್ತಿದೆ. ಅಸಲಿಗೆ ವಿನ್ನರ್ ಆಗಬೇಕಾಗಿದ್ದವರು ರೂಪೇಶ್ ಶೆಟ್ಟಿ ಅಲ್ಲ, ಇದರಲ್ಲಿ ಮೋಸ ನಡೆದಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ರೂಪೇಶ್ ಶೆಟ್ಟಿ ಉತ್ತಮ ಆಟಗಾರರೆ ಆಗಿದ್ದರು, ಆದರೆ ಅವರಿಗಿಂತ ಮತ್ತೊಬ್ಬ ಆಟಗಾರ ಜನರಿಗೆ ಇನ್ನು ಹೆಚ್ಚು ಇಷ್ಟವಾಗಿದ್ದರು ಎನ್ನುತ್ತಿದ್ದಾರೆ ನೆಟ್ಟಿಗರು. ಇದರ ಬಗ್ಗೆಯೇ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗುತ್ತಿದೆ. ಅಷ್ಟಕ್ಕೂ ನೆಟ್ಟಿಗರು ಹೇಳುತ್ತಿರುವುದು ಮತ್ಯಾರ ಬಗ್ಗೆ ಕೂಡ ಅಲ್ಲ, ರೂಪೇಶ್ ರಾಜಣ್ಣ ಅವರ ಬಗ್ಗೆ. ಇದನ್ನು ಓದಿ..Biggboss Kannada: ಬಿಗ್ ಬಾಸ್ ನಿಂದ ಹೊರಬಂದ ತಕ್ಷಣ; ಸನ್ಯಾ ಬಳಿ ಹೋಗಿ ಏನು ಮಾಡ್ತಾರಂತೆ ಗೊತ್ತೇ? ರೂಪೇಶ್ ಶೆಟ್ಟಿ ಹೇಳಿಕೆ ಕಂಡು ಬೆಚ್ಚಿ ಬೆರಗಾದ ಜನ.

ರೂಪೇಶ್ ಶೆಟ್ಟಿ ಅವರು ವಿನ್ನರ್ ಆಗಿ ಹೊರಹೊಮ್ಮಿದ್ದರು, ಆದರೆ ರೂಪೇಶ್ ರಾಜಣ್ಣ ಅವರು ಕೂಡ ಅಷ್ಟೇ ಎಫರ್ಟ್ಸ್ ಹಾಕಿದ್ದರು, ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ತಪ್ಪು ನಡೆದಾಗ ಅದರ ವಿರುದ್ಧ ಧ್ವನಿ ಎತ್ತಿದ್ದರು, ಎಲ್ಲರಿಗೂ ಬಹಳ ಇಷ್ಟವಾಗಿದ್ದರು. ಹಾಗಾಗಿ ರೂಪೇಶ್ ರಾಜಣ್ಣ ಅವರೇ ವಿನ್ನರ್ ಆಗಬೇಕಿತ್ತು ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ಸ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಬಿಗ್ ಬಾಸ್ ನಲ್ಲಿ ಈ ಸಾರಿ ವಿನ್ನರ್ ಆಯ್ಕೆ ಸರಿಯಾಗಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು ಮತ್ತು ರೂಪೇಶ್ ರಾಜಣ್ಣ ಅವರ ಅಭಿಮಾನಿಗಳು. ಲಕ್ಷಾಂತರ ಅಭಿಮಾನಿಗಳು ಇದೆ ರೀತಿ ಹೇಳುತ್ತಿದ್ದು, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು, ಕಾಮೆಂಟ್ಸ್ ಮೂಲಕ ತಿಳಿಸಿ.. ಇದನ್ನು ಓದಿ..Biggboss Kannada: ಬರಲ್ಲ ಬರಲ್ಲ ಎಂದರೂ ದಿವ್ಯ ರವರನ್ನು ಬಲವಂತವಾಗಿ ಕರೆತರಲು ನೀಡಿದ ಸಂಭಾವನೆ ಎಷ್ಟು ಗೊತ್ತೇ? ಕಳೆದ ಬಾರಿ 30 ಸಾವಿರ, ಆದರೆ ಈ ಬಾರಿ ಎಷ್ಟು ಲಕ್ಷ ಗೊತ್ತೇ?

Comments are closed.