Neer Dose Karnataka
Take a fresh look at your lifestyle.

Kannada News: ಅಂಬರೀಷ್ ಪ್ರಭಾಕರ್ ಒಟ್ಟಿಗೆ ನಟಿಸುತ್ತಿದ್ದ ಅತಿ ನಿರೀಕ್ಷೆ ಮೂಡಿಸಿದ್ದ ಸಿನಿಮಾ, ಅರ್ಧಕ್ಕೆ ನಿಂತಿದ್ದು ಯಾಕೆ ಗೊತ್ತೇ??

Kannada News: ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಶೈಲಿಯಲ್ಲಿ ವಿಭಿನ್ನವಾದ ಸಿನಿಮಾಗಳನ್ನು ಕೊಟ್ಟು ಖ್ಯಾತ ನಿರ್ದೇಶಕ ಎನ್ನಿಸಿಕೊಂಡಿರುವವರು ಓಂ ಪ್ರಕಾಶ್ ರಾವ್. ಸಿಂಹದ ಮರಿ, ಏಕೆ 47 ಅಂತಹ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆದರೆ ಇವರ ಬಹಳ ದೊಡ್ಡ ಕನಸಿನ ಸಿನಿಮಾ ಒಂದು ಅರ್ಧಕ್ಕೆ ನಿಂತು ಹೋಗಿದ್ದರ ಬಗ್ಗೆ ಅವರಿಗೆ ಈಗಲೂ ಬೇಸರ ಇದೆ. ಆ ಸಿನಿಮಾಗೆ ಓಂ ಪ್ರಕಾಶ್ ರಾವ್ ಅವರು ಬ್ರಹ್ಮ ಎಂದು ಅದ್ಭುತವಾದ ಟೈಟಲ್ ಇಟ್ಟಿದ್ದರು.

ಈ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗಾಗಿ ಒಂದು ಅದ್ಭುತ ಪಾತ್ರ, ಅವರಿಗೆ ಸರಿಸಮವಾದಂಥಹ ಪಾತ್ರವನ್ನು ಟೈಗರ್ ಪ್ರಭಾಕರ್ ಅವರಿಗಾಗಿ ಸೃಷ್ಟಿಸಿದ್ದರು. ಜೊತೆಗೆ ಕಿಚ್ಚ ಸುದೀಪ್ ಅವರನ್ನು ಈ ಸಿನಿಮಾ ಮೂಲಕ ಹೀರೋ ಆಗಿ ಪರಿಚಯ ಮಾಡಿಸಬೇಕು ಎಂದುಕೊಂಡಿದ್ದರು. ಈ ಸಿನಿಮಾದ ಕಥೆ ಬಗ್ಗೆ ನಿರ್ದೇಶಕರಿಗೆ ಮಾತ್ರವಲ್ಲದೆ, ಅಂಬರೀಶ್ ಅವರಿಗೆ ಮತ್ತು ಪ್ರಭಾಕರ್ ಅವರಿಗೆ ನಂಬಿಕೆ ಇತ್ತು, ಸುದೀಪ್ ಅವರು ಬ್ರಹ್ಮ ಸಿನಿಮಾ ಇಂದ ತಮ್ಮ ವೃತ್ತಿ ಜೀವನ ಬದಲಾಗುತ್ತದೆ ಎಂದು ನಿರೇಕ್ಷೆ ಇಟ್ಟುಕೊಂಡಿದ್ದರು. ಎಲ್ಲರ ಆಸೆಯಂತೆ ಈ ಸಿನಿಮಾ ಮುಹೂರ್ತವಾಗಿ, ಚಿತ್ರೀಕರಣ ಶುರುವಾಯಿತು. ಇದನ್ನು ಓದಿ.. Kannada News: ಹಗಲು ರಾತ್ರಿ ಕಷ್ಟ ಪಟ್ಟು ಬೆವರು ಸುರಿಸಿ, ನಟನೆ ಮಾಡಿ ತಮನ್ನಾ ಗಳಿಸಿದ್ದು ಒಟ್ಟು ಎಷ್ಟು ಕೋಟಿ ಗೊತ್ತೇ? ತಿಳಿದರೆ, ಬಗ್ಗಿ ನಮಸ್ಕಾರ ಮಾಡ್ತೀರಾ.

ಆದರೆ ಅರ್ಧ ಸಿನಿಮಾ ಚಿತ್ರೀಕರಣ ಆಗುತ್ತಿದ್ದ ಹಾಗೆಯೇ, ಕೆಲವು ಕಾರಣಗಳಿಂದ ಬ್ರಹ್ಮ ಸಿನಿಮಾ ನಿಂತು ಹೋಯಿತು. ಸಿನಿಮಾ ಬಗ್ಗೆ ಯಾರಲ್ಲಿಯೂ ಸರಿಯಾದ ಸ್ಪಂದನೆ ಇರಲಿಲ್ಲ, ಎಲ್ಲವೂ ಸರಿಹೋಗದೆ ಇದ್ದ ಕಾರಣಕ್ಕೆ, ಬ್ರಹ್ಮ ಸಿನಿಮಾ ಅರ್ಧಕ್ಕೆ ನಿಂತು ಹೋಯಿತು. ಇಂದಿಗೂ ಆ ಸಿನಿಮಾ ನಿಂತಿತು ಎಂದು ಓಂ ಪ್ರಕಾಶ್ ಅವರಿಗು ಬೇಸರವಿದೆ. ಆದರೆ ಆ ಸಿನಿಮಾ ಈಗಿನ ಕಾಲಕ್ಕೆ ಸರಿಹೊಂದುವುದಿಲ್ಲ ಎನ್ನುವ ಕಾಲಕ್ಕೆ ಆ ಸಿನಿಮಾ ಕಥೆ ಈಗಲೂ ಹಾಗೆಯೇ ಉಳಿದುಹೋಗಿದೆ ಎಂದು ಓಂ ಪ್ರಕಾಶ್ ರಾವ್ ಅವರು ಹೇಳಿದ್ದಾರೆ. ಇದನ್ನು ಓದಿ..Kannada News: ಎರಡನೇ ಗಂಡನಿಗೆ ವಿಚ್ಚೇದನ ನೀಡಿದ ನಂತರ ಮೂರನೇ ಬಾರಿಗೆ ಪ್ರೀತಿಯಲ್ಲಿ ಬಿದ್ದ ಚಿರು ಪುತ್ರಿ: ಮೂರನೇ ಮದುವೆ ಬಗ್ಗೆ ಭಾವುಕರಾಗಿ ಹೇಳಿದ್ದೇನು ಗೊತ್ತೇ??

Comments are closed.