Neer Dose Karnataka
Take a fresh look at your lifestyle.

Kannada News: ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾವನಾಗಿ ಅದ್ಭುತ ನಟನೆ ಮಾಡಿರುವ ಮಾಧವ ಪಾತ್ರದಾರಿ ಬ್ಯಾಕ್ ಗ್ರೌಂಡ್ ಏನು ಗೊತ್ತೇ? ನಿಜಕ್ಕೂ ಇವರು ಯಾರು ಗೊತ್ತೇ?

Kannada News: ಜೀಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾಗಿ ಬಹಳ ಬೇಗ ಜನಪ್ರಿಯತೆ ಗಳಿಸಿಕೊಂಡಿರುವ ಧಾರವಾಹಿ ಶ್ರೀರಸ್ತು ಶುಭಮಸ್ತು, ಖ್ಯಾತ ಹಿರಿಯನಟಿ ಸುಧಾರಾಣಿ ಅವರು ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಈ ಧಾರವಾಹಿ ಜನರಿಗೆ ಬಹಳ ಇಷ್ಟವಾಗಿದೆ. ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಎಲ್ಲಾ ಪಾತ್ರಗಳು ಕೂಡ ಜನರಿಗೆ ಮೆಚ್ಚುಗೆಯಾಗಿದೆ, ಅದರಲ್ಲೂ ಮಾಧವ್ ಪಾತ್ರ ವೀಕ್ಷಕರ ಮೆಚ್ಚುಗೆ ಗಳಿಸಿದೆ. ಮಾವ ಅಂದ್ರೆ ಮಾಧವ್ ಥರ ಇರಬೇಕು ಎಂದು ಜನರು ಹೇಳುತ್ತಿದ್ದಾರೆ. ಅಷ್ಟಕ್ಕೂ ಮಾಧವ್ ಪಾತ್ರದಲ್ಲಿ ಅಭಿನಯಿಸುತ್ತಿರುವ ಇವರು ನಿಜಕ್ಕೂ ಯಾರು? ಇವರ ಬ್ಯಾಕ್ ಗ್ರೌಂಡ್ ಎಂದು ಗೊತ್ತಾ?

ಮಾಧವ್ ಪಾತ್ರ ನೋಡಿದರೆ, ಎಷ್ಟು ಸರಳ, ಸೌಮ್ಯ ವ್ಯಕ್ತಿತ್ವ ಹೊಂದಿರುವವರು ಎಂದು ಅನ್ನಿಸುತ್ತದೆ. ಮಾಧವ್ ಪಾತ್ರದಲ್ಲಿ ನಟಿಸುತ್ತಿರುವವರ ನಿಜವಾದ ಹೆಸರು ಅಜಿತ್ ಹಂದೆ. ಇವರು ಮಂಗಳೂರು ಮೂಲದವರು. ಕನ್ನಡದಲ್ಲಿ ಥಿಯೇಟರ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಅಜಿತ್ ಅವರು ಹಲವು ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅಷ್ಟೇ ಅಲ್ಲದೆ, ಬಿದಿಗೆ ಚಂದ್ರಮ, ಗರ್ವ, ಹಿಂದಿಯ ಚೋಟಿಮಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಅಜಿತ್ ಅವರು ಕೊನೆಯದಾಗಿ ನಟಿಸಿದ್ದು ಮುಕ್ತ ಧಾರವಾಹಿಯಲ್ಲಿ, ಸ್ವಾಮೀಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅಜಿತ್ ಅವರು ನಟನೆಯಿಂದ ದೂರ ಉಳಿದು, ಅಮೆರಿಕಾಗೆ ಹೋಗಿ ಫಿಲ್ಮ್ ಮೇಕಿಂಗ್ ಕೋರ್ಸ್ ಮಾಡಿದರು. ಇದನ್ನು ಓದಿ..Kannada News: ದರ್ಶನ್ ಇದೊಂದು ಕೆಲಸ ಮಾಡಿದರೆ ಕ್ರಾಂತಿ ಸಿನೆಮಾಗೆ ಅಡ್ಡಗಾಲು ಹಾಕೋಕೆ ಯಾರು ಬರಲ್ಲ, ದರ್ಶನ್ ಈ ಚಿಕ್ಕ ಕೆಲಸ ಮಾಡಿ

ಬಳಿಕ ಅವರು ತಮ್ಮದೇ ಪ್ರೊಡಕ್ಷನ್ ಹೌಸ್ ಶುರು ಮಾಡಿ, ಹಲವು ಕಿರುಚಿತ್ರ, ಡಾಕ್ಯುಮೆಂಟರಿ, ಮ್ಯೂಸಿಕ್ ಆಲ್ಬಮ್, ಜಾಹೀರಾತುಗಳು ಹೀಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಹಿಂದಿ ಸಿನಿಮಾ ಒಂದರಲ್ಲಿ ಖ್ಯಾತ ನಟಿ ನಂದಿತಾ ದಾಸ್ ಅವರೊಡನೆ ತೆರೆ ಹಂಚಿಕೊಂಡಿದ್ದಾರೆ. ಈ ಮಾಧವ್ ಪಾತ್ರ ಅಜಿತ್ ಅವರ ವಯಸ್ಸಿಗೆ ಮೀರಿದ ಪಾತ್ರ, ಅವರಿಗೆ ಈಗ 4 ವರ್ಷದ ಪುಟ್ಟ ಮಗನಿದ್ದಾನೆ, ಅಜಿತ್ ಅವರಿಗೆ ಬೇಗ ಬಿಳಿ ಕೂದಲು ಬಂದು, ಕೂದಲಿಗೆ ಬಣ್ಣ ಹಚ್ಚದ ಕಾರಣ, ಪಾತ್ರಕ್ಕೆ ಅದೇ ರೀತಿ ಬೇಕು ಎಂದು, ಅಪ್ರೋಚ್ ಮಾಡಿದಾಗ ನೋ ಎಂದಿದ್ದ ಅಜಿತ್ ಅವರು, ಪಾತ್ರದ ವಿವರಣೆ ಕೇಳಿ, ಒಪ್ಪಿಕೊಂಡರಂತೆ. ಈಗ ಎಲ್ಲೇ ಹೋದರು ನನರು ಗುರುತಿಸುವುದನ್ನು ನೋಡಿದರೆ ಸಂತೋಷ ಆಗುತ್ತದೆ ಎಂದು ಅಜಿತ್ ಅವರು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಇದನ್ನು ಓದಿ.. Kannada News: ರಾಮಾಚಾರಿ ಭರ್ಜರಿ ಯಶಸ್ಸು ಕಂಡರೂ ಕೂಡ ನಂತರ ರವಿಚಂದ್ರನ್ ರವರ ಜೊತೆ ಮಾಲಾಶ್ರೀ ರವರು ನಟನೆ ಮಾಡಲಿಲ್ಲ ಯಾಕೆ ಗೊತ್ತೇ??

Comments are closed.