Neer Dose Karnataka
Take a fresh look at your lifestyle.

Kannada News: ಅನ್ನ ಕೊಟ್ಟ ಕನ್ನಡ ಬಿಟ್ಟು, ಯಶ್ ಬರ್ತ್ ಡೇ ಗೆ ಪ್ರಶಾಂತ್ ನೀಲ್ ವಿಶ್ ಮಾಡಿದ್ದು ಯಾವ ಭಾಷೆ ಗೊತ್ತೇ?? ಕನ್ನಡ ಓಲಾಟಗಾರರೇ ಇದು ಕಾಣುತ್ತಿಲ್ಲವೇ??

Kannada News: ರಾಕಿ ಭಾಯ್ ಯಶ್ (Yash) ಅವರು ಮೊನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ, ಯಶ್ ಅವರು ಈ ವರ್ಷ ಕೂಡ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ದುಬೈನಲ್ಲಿ ಕುಟುಂಬದವರು ಮತ್ತು ಸ್ನೇಹಿತರ ಜೊತೆಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡರು ರಾಕಿ ಭಾಯ್. ಯಶ್ ಅವರ ಹುಟ್ಟುಹಬ್ಬಕ್ಕೆ ನಮ್ಮ ದೇಶದ ಸಾಕಷ್ಟು ಸೆಲೆಬ್ರಿಟಿಗಳು, ಅವರ ಎಲ್ಲಾ ಅಭಿಮಾನಿಗಳು ಕೂಡ ಸೋಷಿಯಲ್ ಮೀಡಿಯಾ ಮೂಲಕ ಬರ್ತ್ ಡೇ ವಿಶ್ ತಿಳಿಸಿದರು.

ಯಶ್ ಅವರ ಹುಟ್ಟುಹಬ್ಬಕ್ಕೆ ಕೆಜಿಎಫ್ (KHF) ಅಂತಹ ಗ್ರೇಟ್ ಸಿನಿಮಾ ಕೊಟ್ಟ ಡೈರೆಕ್ಟರ್ ಪ್ರಶಾಂತ್ ನೀಲ್ (Prashanth Neel) ಅವರು ವಿಶ್ ಮಾಡಿದ್ದಾರೆ. ಆದರೆ ಪ್ರಶಾಂತ್ ನೀಲ್ ಅವರು ಕನ್ನಡದಲ್ಲಿ ವಿಶ್ ಮಾಡದೆ ಕೆಜಿಎಫ್ ಸಿನಿಮಾದಲ್ಲಿರುವ ಉರ್ದು ಡೈಲಾಗ್ ಗಳನ್ನು ಬರೆದು, ಬರ್ತ್ ಡೇ ವಿಶ್ ಮಾಡಿದ್ದಾರೆ. ಇದರಿಂದ ಕನ್ನಡದ ಅಭಿಮಾನಿಗಳಿಗೆ ಬೇಸರವಾಗಿದೆ. ಪ್ರಶಾಂತ್ ಅವರು ಕನ್ನಡದಲ್ಲೇ ವಿಶ್ ಮಾಡಬಹುದಿತ್ತು, ಸಕ್ಸಸ್ ಪಡೆಯುವವರೆಗೂ ಕನ್ನಡ ಬೇಕಿತ್ತು, ಈಗ ಕನ್ನಡ ಬೇಡ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Kannada News: ರಾಮಾಚಾರಿ ಭರ್ಜರಿ ಯಶಸ್ಸು ಕಂಡರೂ ಕೂಡ ನಂತರ ರವಿಚಂದ್ರನ್ ರವರ ಜೊತೆ ಮಾಲಾಶ್ರೀ ರವರು ನಟನೆ ಮಾಡಲಿಲ್ಲ ಯಾಕೆ ಗೊತ್ತೇ??

ಪ್ರಶಾಂತ್ ನೀಲ್ ಅವರ ಮೇಲೆ ಕನ್ನಡಿಗರಿಗೆ ಸ್ವಲ್ಪ ಬೇಸರವಿದೆ, ಕೆಜಿಎಫ್ ಸಕ್ಸಸ್ ನಂತರ ಪ್ರಶಾಂತ್ ನೀಲ್ ಅವರು ಪ್ರಭಾಸ್ ಅವರ ಜೊತೆಗೆ ಸಲಾರ್ ಸಿನಿಮಾ ಮಾಡುತ್ತಿದ್ದಾರೆ. ನಂತರ ಜ್ಯೂನಿಯರ್ ಎನ್.ಟಿ.ಆರ್ ಅವರ ಜೊತೆಗೆ ಸಿನಿಮಾ ಮಾಡಲಿದ್ದಾರೆ. ಕನ್ನಡದ ಕಲಾವಿದರ ಜೊತೆಗೂ ಸಿನಿಮಾ ಮಾಡಬಹುದಿತ್ತು ಎನ್ನುವುದು ಕನ್ನಡಿಗರ ಅಭಿಪ್ರಾಯ ಆಗಿತ್ತು. ಆದರೆ ಈಗ ಉರ್ದು ಭಾಷೆಯಲ್ಲಿ ವಿಶ್ ಮಾಡಿ ಕನ್ನಡಿಗರಿಗೆ ಇನ್ನಷ್ಟು ನಿರಾಶೆಯಾಗುವ ಹಾಗೆ ಮಾಡಿದ್ದಾರೆ. ಇದನ್ನು ಓದಿ.. Kannada News: ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾವನಾಗಿ ಅದ್ಭುತ ನಟನೆ ಮಾಡಿರುವ ಮಾಧವ ಪಾತ್ರದಾರಿ ಬ್ಯಾಕ್ ಗ್ರೌಂಡ್ ಏನು ಗೊತ್ತೇ? ನಿಜಕ್ಕೂ ಇವರು ಯಾರು ಗೊತ್ತೇ?

Comments are closed.