Neer Dose Karnataka
Take a fresh look at your lifestyle.

Kannada News: ಗಂಡ ಐಎಎಸ್, ಹೆಂಡತಿ ಐಪಿಎಸ್ ಇಬ್ಬರು ಮದುವೆಯಾಗಲು ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ ಅದು ಹೇಗೆ ಗೊತ್ತೇ? ಇದೇನ್ ಕಥೆ ಗೊತ್ತೇ??

Kannada News: ಸಾಮಾನ್ಯವಾಗಿ ದೊಡ್ಡ ಅಧಿಕಾರಿಗಳು, ದೊಡ್ಡ ಕೆಲಸದಲ್ಲಿ ಇರುವವರು ಲಕ್ಷಾಂತರ ಹಣ ಖರ್ಚು ಮಾಡಿ, ಸ್ಟೈಲಿಶ್ ಆಗಿ ಮದುವೆಯಾಗುತ್ತಾರೆ. ಆದರೆ ಇಂದು ನಾವು ನಿಮಗೆ ತಿಳಿಸಲಿರುವ ಈ ಜೋಡಿ, ಒಂದು ರೂಪಾಯಿ ಕೂಡ ಖರ್ಚು ಮಾಡದೆ ಮದುವೆಯಾದರು. ಅಷ್ಟಕ್ಕೂ ಈ ಜೋಡಿ ಯಾರು ಗೊತ್ತಾ? ಐಪಿಎಸ್ ಅಧಿಕಾರಿ ನವಜೋತ್ ಸಿಮಿ ಮತ್ತು ಐಎಎಸ್ ಅಧಿಕಾರಿ ತುಷಾರ್ ಸಿಂಗ್ಲ. ದೇಶದಲ್ಲಿ ಬಹಳ ಹೆಸರು ಹೆಸರು ಮಾಡಿರುವ ಅಧಿಕಾರಿಗಳಲ್ಲಿ ಇವರಿಬ್ಬರು ಕೂಡ ಸೇರಿದ್ದಾರೆ..

ಈ ಜೋಡಿ ಬೇರೆಯವರ ಹಾಗೆ LBSNAA ಭೇಟಿಯಾಗಿ ಮದುವೆ ಆದವರಲ್ಲ. ಆಕಸ್ಮಿಕವಾಗಿ ನಡೆದ ಇವರ ಭೇಟಿ ಪ್ರೀತಿಯಾಗಿ ಮದುವೆ ಆಗುವ ನಿರ್ಧಾರ ಮಾಡಿದರು. ಇವರ ಲವ್ ಸ್ಟೋರಿ ಬಹಳ ಕುತೂಹಲಕಾರಿಯಾಗಿದೆ. ಡಾ.ನವಜೋತ್ ಸಿಮಿ ಅವರು ಡೆಂಟಲ್ ಡಾಕ್ಟರ್ ಆಗಿದ್ದವರು, ಆದರೆ ಸಿವಿಲ್ ಸರ್ವಿಸ್ ಮೇಲೆ ಆಸಕ್ತಿ ಇದ್ದ ಕಾರಣ, ತಮ್ಮ ಡಾಕ್ಟರ್ ವೃತ್ತಿಯನ್ನು ಬಿಟ್ಟು, ಯು.ಪಿ.ಎಸ್.ಸಿ ಪರೀಕ್ಷೆಗೆ ತಯಾರಿ ನಡೆಸಿ, 2016ರಲ್ಲಿ ಮೊದಲ ಸಾರಿ ಪರೀಕ್ಷೆ ಬರೆದು, ವಿಫಲರಾದರು, ಅದರ ಆತ್ಮಸ್ಥೈರ್ಯ ಕಳೆದುಕೊಳ್ಳದೆ, ಮತ್ತೆ ಪರೀಕ್ಷೆ ಬರೆದು ಉತ್ತೀರ್ಣರಾದರು. ಇಂದು ಐಪಿಎಸ್ ಅಧಿಕಾರಿ ಆಗಿದ್ದಾರೆ. ಇದನ್ನು ಓದಿ..Kannada News: ಅವಕಾಶವಿಲ್ಲದೆ ಕಾಲಿ ಇದ್ದ ಶ್ರುತಿಗೆ ಅವಕಾಶ ನೀಡಿದ ಬಾಲಯ್ಯ ಬುಡಕ್ಕೆ ಬೆಂಕಿ ಇಟ್ಟ ಶ್ರುತಿ ಹಾಸನ್. ಕಷ್ಟ ಎಂದು ಸಹಾಯ ಮಾಡಿದಕ್ಕೆ ಈಕೆ ಮಾಡಿದ್ದೇನು ಗೊತ್ತೇ??

ಇನ್ನು ತುಷಾರ್ ಸಿಂಗ್ಲ ಪಂಜಾಬ್ ನ ಬರ್ನಲ ನಿವಾಸಿ, ಇವರು ಓದಿದ್ದು ಐಐಟಿ ದೆಹಲಿಯಲ್ಲಿ, 2015ರ ಯು.ಪಿ.ಎಸ್.ಸಿ ಬ್ಯಾಚ್ ನಲ್ಲಿ ಪರೀಕ್ಷೆ ಕ್ಲಿಯರ್ ಮಾಡಿಕೊಂಡು, ಪಶ್ಚಿಕ ಬಂಗಾಳದ ಕೇಡರ್ ನಲ್ಲಿ ನೇಮಕಗೊಂಡರು. ಇವರಿಬ್ಬರು ಮೊದಲಿಗೆ ಭೇಟಿ ಮಾಡಿದ್ದು, ಪಾಟ್ನಾದ ಒಂದು ರೆಸ್ಟೋರೆಂಟ್ ನಲ್ಲಿ, ನಂತರ ಇನ್ನು ಕೆಲವು ಸಾರಿ ಭೇಟಿಯಾಗಿ, ಪ್ರೀತಿ ಶುರುವಾಗಿ, ಇಬ್ಬರು ಕೂಡ ಮದುವೆಯಾಗಲು ನಿರ್ಧಾರ ಮಾಡಿದರು. ಇವರಿಬ್ಬರು ಕೆಲಸದಲ್ಲಿ ಬಹಳ ಬ್ಯುಸಿ ಇದ್ದ ಕಾರಣ, ಮದುವೆ ಆಗುವುದಕ್ಕೆ ಇಬ್ಬರಿಗೂ ಸಮಯ ಸಿಗಲಿಲ್ಲ. ಆಗ, ಇಬ್ಬರು 2020ರ ಫೆಬ್ರವರಿ 14ರಂದು ವೆಸ್ಟ್ ಬೆಂಗಾಲ್ ಗೆ ಬಂದರು, ಅಲ್ಲಿ ಕೆಲವು ಸ್ನೇಹಿತರ ಸಮ್ಮುಖದಲ್ಲಿ, ಐಎಎಸ್ ಅಧಿಕಾರಿ ತುಷಾರ್ ಸಿಂಗ್ಲ ಅವರ ಆಫೀಸ್ ನಲ್ಲೇ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಒಂದು ರೂಪಾಯಿ ಖರ್ಚಿಲ್ಲದೆ ಈ ಜೋಡಿಯ ಮದುವೆ ನಡೆದಿದೆ. ಇದನ್ನು ಓದಿ.. Kannada News: ಬಿಗ್ ನ್ಯೂಸ್: ಪವಿತ್ರ ರವರು ನರೇಶ್ ರವರನ್ನು ಪ್ರೀತಿ ಮಾಡಿದಕ್ಕೆ ಕಾರಣ ಬಿಚ್ಚಿಟ್ಟ ನರೇಶ್ ಪತ್ನಿ ರಮ್ಯಾ; ಏನಾಗಿತ್ತು ಗೊತ್ತೇ? ಅದಕ್ಕೇನಾ ಪ್ರೀತಿ ಮಾಡಿದ್ದು?

Comments are closed.