Neer Dose Karnataka
Take a fresh look at your lifestyle.

Kannada News: ಡೈರೆಕ್ಟರ್ ಜೊತೆ ಲಿಂಕ್: ಸ್ನೇಹಿತನ ಜೊತೆ ಲವ್: ಅವಕಾಶವಿಲ್ಲದೆ ಯುವ ಹೀರೊಯಿನ್ ಕೊನೆಗೆ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೆ?

Kannada News: ಬಣ್ಣದ ಪ್ರಪಂಚದಲ್ಲಿ ಯಾರು ಯಾವಾಗ ಹೇಗೆ ಸ್ಟಾರ್ ಆಗುತ್ತಾರೆ ಎಂದು ಹೇಳಲು ಆಗುವುದಿಲ್ಲ. ಒಂದೇ ರಾತ್ರಿಯಲ್ಲಿ ಸ್ಟಾರ್ ಆಗುವವರು, ಒಂದೇ ರಾತ್ರಿಯಲ್ಲಿ ಹಿಂದಕ್ಕೆ ಬೀಳಬಹುದು. ಒಂದೇ ಸಿನಿಮಾ ಇಂದ, ರಾತ್ರೋರಾತ್ರಿ ಸ್ಟಾರ್ ಆಗಿಬಿಡುತ್ತಾರೆ. ಅದೇ ರೀತಿ ವರ್ಷಾನುಗಟ್ಟಲೇ ಹಲವು ಸಿನಿಮಾಗಳಲ್ಲಿ ನಟಿಸಿದರು ಸಹ ಒಳ್ಳೆಯ ಹೆಸರು ಪಡೆಯದೆ ಇರುವವರು ಕೂಡ ಆಗಿದ್ದಾರೆ. ಸ್ಟಾರ್ ನಟಿಯಾಗುವ ಪ್ರತಿಭೆ ಇದ್ದರೂ ಕೂಡ ಸ್ಟಾರ್ ಪಟ್ಟಕ್ಕೆ ಏರಲಾಗದೆ ಹಿಂದೆ ಬಂದಿದ್ದಾರೆ. ಯಂಗ್ ಹೀರೋಗಳ ಸಿನಿಮಾದಲ್ಲಿ ಒಳ್ಳೆಯ ಅವಕಾಶ ಸಿಗದೆ, ಹಿರಿಯ ನಟರ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇವರ ಅದೃಷ್ಟ ಬದಲಾಗಲೇ ಇಲ್ಲ. ಈ ನಟಿ ಮತ್ಯಾರು ಅಲ್ಲ, ಪ್ರಗ್ಯಾ ಜೈಸ್ವಾಲ್ ಅವರು. ಕಂಚೆ ಸಿನಿಮಾ ಮೂಲಕ ಪ್ರಗ್ಯಾ ಅವರು ಕಾಣಿಸಿಕೊಂಡರು. ಬಳಿಕ ತೆಲುಗು ಚಿತ್ರರಂಗದ ಖ್ಯಾತ ನಟರಾದ ನಾಗಾರ್ಜುನ, ಬಾಲಕೃಷ್ಣ ಅವರಂತಹ ದೊಡ್ಡ ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ನಟಿಸಿದರು. ಹಾಗಿದ್ದರೂ ಅವರಿಗೆ ಅದೃಷ್ಟವಿಲ್ಲದ ಕಾರಣ, ಹೆಚ್ಚಿನ ಹೆಸರು ಪಡೆಯಲಿಲ್ಲ. ಬಾಲಯ್ಯ ಅವರ ಅಖಂಡ ಸಿನಿಮಾಗೆ ಇವರೇ ನಾಯಕಿ, ಈ ಸಿನಿಮಾ ಸೂಪರ್ ಹಿಟ್ ಆದರೂ ಕೂಡ ಇವರಿಗೆ ಒಳ್ಳೆಯ ಸಿನಿಮಾಗಳು ಸಿಗಲಿಲ್ಲ. ಈ ಕಾರಣಕ್ಕೆ ಈಗ ಪ್ರಗ್ಯಾ ಜೈಸ್ವಾಲ್ ಅವರು ಮದುವೆ ಆಗುವ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ನಿರ್ದೇಶಕರೊಬ್ಬರ ಜೊತೆಗೆ ಇವರ ಹೆಸರು ಕೇಳಿಬಂದಿತ್ತು. ಇದನ್ನು ಓದಿ..Kannada Serial News: ಮೊದಲ ಧಾರಾವಾಹಿಯಲ್ಲಿಯೇ ಜನರ ಮನಗೆದ್ದಿರುವ ಸಿದ್ಧಾಂತ್ ಖ್ಯಾತಿಯ ಅಕ್ಷಯ್, ನಿಜ ಜೀವನದಲ್ಲಿ ನಡೆದ ಘಟನೆ ಕೇಳಿದರೆ ಮರುಗುತ್ತೀರಿ. ಅಂದು ಏನಾಗಿತ್ತು ಗೊತ್ತೆ?

ಪ್ರಗ್ಯಾ ಜೈಸ್ವಾಲ್ ಅವರ ಕಾರಣದಿಂದಲೇ ಆ ನಿರ್ದೇಶಕ ಅವರ ಹೆಂಡತಿಗೆ ವಿಚ್ಛೇದನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈಗ ಕೇಳಿಬರುತ್ತಿರುವ ವಿಚಾರ ಏನೆಂದರೆ, ಪ್ರಗ್ಯಾ ಜೈಸ್ವಾಲ್ ಅವರು ತಮ್ಮ ಕೆರಿಯರ್ ಚೆನ್ನಾಗಿಲ್ಲ ಎನ್ನುವ ಕಾರಣಕ್ಕೆ ತಮ್ಮ ಸ್ನೇಹಿತನನ್ನೇ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರಿಗೆ ಚಿತ್ರರಂಗದಲ್ಲಿ ಅವಕಾಶ ಇಲ್ಲದ ಈ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಪ್ರಗ್ಯಾ ಅವರು ನಿಜವಾಗಲೂ ಮದುವೆ ಆಗುತ್ತಿದ್ದಾರಾ? ಹಾಗಿದ್ದರೆ ಪ್ರಗ್ಯಾ ಅವರು ಮದುವೆ ಆಗಲಿರುವ ಆ ಲಕ್ಕಿ ಹುಡುಗ ಯಾರು ಎಂದು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ. ಇದನ್ನು ಓದಿ.. ಅಮರ ಪ್ರೇಮಿಗಳು, ಏಳೇಳು ಜನ್ಮದಲ್ಲಿಯೂ ಒಂದಾಗಿರುವ ರಾಹುಲ್ ಹಾಗೂ ಆಥಿಯಾ ವಯಸ್ಸಿನ ಅಂತರ ತಿಳಿದರೆ ನೀವು ನಂಬೋದೇ ಇಲ್ಲ. ಯಾರು ದೊಡ್ಡವರು ಗೊತ್ತೇ?

Comments are closed.