Neer Dose Karnataka
Take a fresh look at your lifestyle.

Kannada Serial News: ಮೊದಲ ಧಾರಾವಾಹಿಯಲ್ಲಿಯೇ ಜನರ ಮನಗೆದ್ದಿರುವ ಸಿದ್ಧಾಂತ್ ಖ್ಯಾತಿಯ ಅಕ್ಷಯ್, ನಿಜ ಜೀವನದಲ್ಲಿ ನಡೆದ ಘಟನೆ ಕೇಳಿದರೆ ಮರುಗುತ್ತೀರಿ. ಅಂದು ಏನಾಗಿತ್ತು ಗೊತ್ತೆ?

Kannada Serial News: ಕನ್ನಡ ಕಿರುತೆರೆಗೆ ಈಗ ಸಾಕಷ್ಟು ಕಲಾವಿದರು ಎಂಟ್ರಿ ಕೊಡುತ್ತಿದ್ದಾರೆ. ಹೊಸ ಕಥೆಗಳಿರುವ ಧಾರವಾಹಿಗಳು ಶುರುವಾಗಿ ವೀಕ್ಷಕರನ್ನು ರಂಜಿಸುತ್ತಿದೆ. ಇತ್ತೀಚೆಗೆ ಶುರುವಾಗಿ ವೀಕ್ಷಕರಿಗೆ ಬಹಳ ಇಷ್ಟ ಆಗಿರುವ ಧಾರವಾಹಿಗಳಲ್ಲಿ ಒಂದು ಕಲರ್ಸ್ ಕನ್ನಡ ವಾಹಿನಿಯ ಒಲವಿನ ನಿಲ್ದಾಣ. ಇದೊಂದು ಪ್ರೇಮಕಥೆ ಆಗಿದ್ದು ವೀಕ್ಷಕರು ಈ ಧಾರವಾಹಿಯನ್ನು ಬಹಳ ಇಷ್ಟಪಡುತ್ತಿದ್ದಾರೆ. ಒಲವಿನ ನಿಲ್ದಾಣ ಧಾರವಾಹಿಯಲ್ಲಿ ಸಿದ್ಧಾಂತ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಪಾತ್ರದಲ್ಲಿ ಇವರನ್ನು ಜನರು ತುಂಬಾ ಇಷ್ಟಪಡುತ್ತಿದ್ದಾರೆ, ಒಬ್ಬ ನಾಯಕ ಹೇಗಿರಬೇಕೋ ಹಾಗೆಯೇ ಇದ್ದಾರೆ ಈ ನಟ. ಇವರ ನಿಜವಾದ ಹೆಸರು ಅಕ್ಷಯ್ ನಾಯಕ್. ಇವರು ಮೂಲತಃ ಮಂಡ್ಯದ ಹುಡುಗ. ಮಂಡ್ಯ ಮೈಸೂರಿನಲ್ಲಿ ಓದಿದ್ದು, ಬೆಳೆದದ್ದು ಎಲ್ಲವೂ. ಕಾಲೇಜು ದಿನಗಳಲ್ಲಿ ಅಕ್ಷಯ್ ನಾಯಕ್ ಅವರಿಗೆ ನಟನೆಯಲ್ಲಿ ಬಹಳ ಆಸಕ್ತಿ ಇತ್ತು. ಕಾಲೇಜು ಚಟುವಟಿಕೆಗಳಲ್ಲಿ ಸಹ ಪಾಲ್ಗೊಳ್ಳುತ್ತಿದ್ದರು. ನಟನೆಯ ಆವಕಾಶಕ್ಕಾಗಿ ಹುಡುಕುವಾಗ, ಅಕ್ಷಯ್ ಅವರಿಗೆ ಬಹಳ ಅವಮಾನಗಳು ಆಗಿದೆ. ಅವಕಾಶ ಕೊಡುತ್ತೇವೆ ಎಂದು ಹೇಳಿ ನಂತರ ಅಕ್ಷಯ್ ಅವರನ್ನು ರಿಜೆಕ್ಟ್ ಮಾಡುತ್ತಿದ್ದರಂತೆ. ಇದನ್ನು ಓದಿ..Kannada News: ದೇಶವನ್ನೇ ಅಲ್ಲಾಡಿಸಿದ್ದ ನರೇಶ್-ಪವಿತ್ರ ಪ್ರಕರಣಕ್ಕೆ ಟ್ವಿಸ್ಟ್: ಅಭಿಮಾನಿಗಳಿಗೆ ಬಾರಿ ನಿರಾಸೆ. ನರೇಶ್ ಗೆ ಶಾಕ್. ಪವಿತ್ರ ಫುಲ್ ಕುಶ್. ಯಾಕೆ ಗೊತ್ತೇ??

ಅಷ್ಟೇ ಅಲ್ಲದೆ, ಕೆಲವು ಸಾರಿ ಅಕ್ಷಯ್ ಅವರನ್ನು ಕರೆಸಿ, ಕಾಸ್ಟ್ಯೂಮ್ ಹಾಕಿಸಿ ನಂತರ ಪಾತ್ರಕ್ಕೆ ಅವರು ಬೇಡ ಎಂದು ಹೆಲ್ ರಿಜೆಕ್ಟ್ ಮಾಡಿದ ಘಟನೆ ಕೂಡ ನಡೆದಿದೆಯಂತೆ. ಇಂತಹ ಸಾಕಷ್ಟು ಅವಮಾನ ಏಳು ಬೀಳು ಇದೆಲ್ಲವನ್ನು ಎದುರಿಸಿ ಇಂದು ಒಲವಿನ ನಿಲ್ದಾಣ ಧಾರವಾಹಿ ಮೂಲಕ ಒಳ್ಳೆಯ ಹೆಸರು ಪಡೆದಿದ್ದಾರೆ. ಈ ಮೊದಲು ತಮಿಳಿನ ಒಂದು ಧಾರವಾಹಿ, ಕನ್ನಡದಲ್ಲಿ ಕಸ್ತೂರಿ ನಿವಾಸ ಮತ್ತು ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ನಟಿಸಿದ್ದರು. ಫೆಬ್ರವರಿ 30 ಹೆಸರಿನ ಸಿನಿಮಾದಲ್ಲಿ ಸಹ ಅಕ್ಷಯ್ ನಾಯಕ್ ನಟಿಸಿದ್ದಾರೆ. ಹಲವು ವರ್ಷ ಕಷ್ಟಪಟ್ಟು ಇಂದು ಒಳ್ಳೆಯ ಸ್ಥಾನಕ್ಕೆ ಬಂದಿದ್ದಾರೆ. ಇದನ್ನು ಓದಿ.. Shrirasthu Shubhamasthu: ಶ್ರೀರಸ್ತು ಶುಭಮಸ್ತು: ಭಾರಿ ನಗು ತರಿಸುವಂತೆ ನಟಿಸುತ್ತಿರುವ ವೆಂಕಟ್ ರಾವ್ ಪಾತ್ರದ ಬಗ್ಗೆ ಜನರ ಅಭಿಪ್ರಾಯವೇನು ಗೊತ್ತೇ?? ನಿಜವಾದ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಗೊತ್ತೇ?

Comments are closed.