Neer Dose Karnataka
Take a fresh look at your lifestyle.

Kannada News: ಮೋಹನ್ ಲಾಲ್ ರಾವರಿಗೋ ಕ್ಯಾರೇ ಎನ್ನದ ರಿಷಬ್ ಶೆಟ್ಟಿ: ಖಡಕ್ ಆಗಿ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ??

Kannada News: ಕಾಂತಾರ (Kantara) ಸಿನಿಮಾ ಯಶಸ್ಸಿನಿಂದ ನಟ ರಿಷಬ್ ಶೆಟ್ಟಿ (Rishab Shetty) ಅವರು ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. 16 ಕೋಟಿ ಬಜೆಟ್ ನಲ್ಲಿ ತಯಾರಾದ ಕಾಂತಾರ ಇಂದು ಬರೋಬ್ಬರಿ 450 ಕೋಟಿ ಗಳಿಸಿದೆ. ಈ ಸಿನಿಮಾ ಯಾವುದೇ ಭಾಷೆಯ ವ್ಯಾಪ್ತಿ ಇಲ್ಲದೆ ಎಲ್ಲಾ ಸಿನಿಪ್ರಿಯರನ್ನು ರಂಜಿಸಿದೆ. ಕಾಂತಾರ ಬಳಿಕ ರಿಷಬ್ ಶೆಟ್ಟಿ ಅವರಿಗೆ ಬಹಳಷ್ಟು ಅವಕಾಶಗಳು ಬರುತ್ತಿದೆ. ಟಾಲಿವುಡ್, ಬಾಲಿವುಡ್ ಎಂದು ಎಷ್ಟೇ ಅವಕಾಶ ಆಫರ್ ಇದ್ದರು ರಿಷಬ್ ಅವರು ಕನ್ನಡದಲ್ಲಿ ಸಿನಿಮಾ ಮಾಡಬೇಕು ಎಂದು ನಿರ್ಧಾರ ಮಾಡಿದ್ದಾರೆ.

ಕಾಂತಾರ ಸಿನಿಮಾ ಸಕ್ಸಸ್ ನಂತರ ಮಲಯಾಳಂ ನ ಸ್ಟಾರ್ ನಟ ಮೋಹನ್ ಲಾಲ್ (Mohan Lal) ಅವರ ಮಲೈಕೋಟ್ಟೈ ವಾಲಿಬನ್ ಸಿನಿಮಾದಲ್ಲಿ ನಟಿಸುವ ಅವಕಾಶ ರಿಷಬ್ ಶೆಟ್ಟಿ ಅವರನ್ನು ಹುಡುಕಿಕೊಂಡು ಹೋಗಿತ್ತು, ಮೊದಲಿಗೆ ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ನಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈಗ ರಿಷಬ್ ಅವರು ಈ ಸಿನಿಮಾದಲ್ಲಿ ನಟಿಸುವ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಮುಂದಿನ ಸಿನಿಮಾ ಕನ್ನಡದಲ್ಲಿಯೇ ಮಾಡಬೇಕು ಎನ್ನುವ ಕಾರಣದಿಂದ ಮೋಹನ್ ಲಾಲ್ ಅವರ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರಂತೆ ರಿಷಬ್. ಈ ಹಿಂದೆ ಹಿಂದಿ ಸಂದರ್ಶನ ದಲ್ಲಿ ನನಗೆ ಬಾಲಿವುಡ್ ನಲ್ಲಿ ಸಿನಿಮಾ ಮಾಡಬೇಕು ಎಂದು ಆಸೆ ಇಲ್ಲ, ಕನ್ನಡದಲ್ಲಿಯೇ ಮಾಡುತ್ತೇನೆ ಎಂದಿದ್ದರು.. ಇದನ್ನು ಓದಿ..Kannada News: ವರದಕ್ಷಿಣೆ ವಿಚಾರದಲ್ಲಿ ಸದ್ದು ಮಾಡಿದ ಯಂಗ್ ಹೀರೋ ಶರ್ವಾನಂದ್: ತೆಗೆದುಕೊಳ್ಳುತ್ತಿರುವುದು ಅದೆಷ್ಟು ಕೋಟಿ ಗೊತ್ತೇ?

ಅದೇ ಮಾತಿನ ಹಾಗೆ ಈಗ ನಡೆದುಕೊಳ್ಳುತ್ತಿದ್ದಾರೆ ರಿಷಬ್. ಕನ್ನಡಿಗರಿಗೆ ಇದು ಸಂತೋಷ ತಂದಿದೆ. ಇನ್ನು ಕಾಂತಾರ2 ಬಗ್ಗೆ ಹೇಳುವುದಾದರೆ, ಇತ್ತೀಚೆಗೆ ನಟಿ ಹರಿಪ್ರಿಯಾ ಅವರ ಮದುವೆಯಲ್ಲಿ ಕಾಣಿಸಿಕೊಂಡ ರಿಷಬ್ ಅವರು, ಅದು ಯಾವಾಗ ಆಗಬೇಕೋ ಅವಾಗ ಆಗುತ್ತೆ ಎಂದಿದ್ದಾರೆ. ಮತ್ತೊಂದು ಕಾರ್ಯಕ್ರಮದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಮಾತನಾಡಿ, ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ, ಕೆಲವು ಭಾಗಗಳು ಮಳೆಗಾಲದಲ್ಲಿ ಚಿತ್ರೀಕರಣ ಆಗಬೇಕು, ಹಾಗಾಗಿ ಜೂನ್ ನಲ್ಲಿ ಚಿತ್ರೀಕರಣ ಶುರುವಾಗುತ್ತದೆ, 2024ರ ಮೇ ತಿಂಗಳಿನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನು ಓದಿ..ಶಾಕಿಂಗ್ ರಹಸ್ಯ ಬಯಲುಪಡಿಸಿದ ನರೇಶ್: ಮೂರನೇ ಹೆಂಡತಿ, ಕುಡಿದು ಬಟ್ಟೆ ಇಲ್ಲದೆ ಆ ಕೆಲಸ ಮಾಡಿದ್ದಕ್ಕಾಗಿ ಡೈವೋರ್ಸ್ ಬೇಕಂತೆ. ಏನು ಮಾಡಿದ್ದರಂತೆ ಗೊತ್ತೆ?

Comments are closed.