Neer Dose Karnataka
Take a fresh look at your lifestyle.

Kannada News: ಬೇಡ ಬೇಡ ಎಂದು ಹೇಳಿದರು ಕೇಳದೆ ಗೆರೆ ದಾಟಿಯೇ ಬಿಟ್ಟ ಶ್ರುತಿ ಹಾಸನ್: ಶ್ರುತಿ ಮಾಡಿದ ಮಾಡಬಾರದ ಕೆಲಸ ಏನು ಗೊತ್ತೇ??

Kannada News: ನಟಿ ಶ್ರುತಿ ಹಾಸನ್ ಅವರು ಭಾರತ ಚಿತ್ರರಂಗದ ಮೇರು ನಟ ಎಂದು ಖ್ಯಾತಿಯಾಗಿರುವ ನಟ ಕಮಲ್ ಹಾಸನ್ ಅವರ ಮಗಳು, ಆದರೆ ತಂದೆಯ ಹೆಸರು ಬಳಸಿಕೊಳ್ಳದೆ ಚಿತ್ರರಂಗದಲ್ಲಿ ಸಾಧನೆ ಮಾಡಬೇಕು ಎಂದು ಬಂದವರು ಶ್ರುತಿ ಹಾಸನ್. ಮೊದಲಿಗೆ ಇವರನ್ನು ಐರನ್ ಲೆಗ್ ಎಂದು ಕರೆಯುತ್ತಿದ್ದರು. ಶ್ರುತಿ ಹಾಸನ್ ಅವರು ಸಿನಿಮಾಗಳಲ್ಲಿ ನಟಿಸಿದ್ದರು ಸಹ ಅವರಿಗೆ ಒಳ್ಳೆಯ ಹೆಸರು ಸಿಕ್ಕಿರಲಿಲ್ಲ. ಬಹಳ ವರ್ಷಗಳ ಕಾಲ ಒಂದು ಸಕ್ಸಸ್ ಗಾಗಿ ಮತ್ತು ಒಳ್ಳೆಯ ಹೆಸರಿಗಾಗಿ ಬಬಳ ಕಷ್ಟಪಟ್ಟಿದ್ದಾರೆ ಶ್ರುತಿ. ಕೊನೆಗೆ ಗಬ್ಬರ್ ಸಿಂಗ್ ಸಿನಿಮಾದಲ್ಲಿ ತಮ್ಮ ಸಾಮರ್ಥ್ಯ ಏನು ಎಂದು ಪ್ರೂವ್ ಮಾಡಿಕೊಂಡರು..

ಇಂದಿಗೂ ಸ್ಟಾರ್ ಹೀರೋಯಿನ್ ಸ್ಟೇಟಸ್ ನಲ್ಲಿಯೇ ಇದ್ದಾರೆ. ಶ್ರುತಿ ಹಾಸನ್ ಅವರು ನಟಿಯಾಗಿ ಚಿತ್ರರಂಗಕ್ಕೆ ಬರಬೇಕು ಎಂದು ಬಂದವರಲ್ಲ. ಇವರು ಮಲ್ಟಿ ಟ್ಯಾಲೆಂಟೆಡ್. ಶ್ರುತಿ ಅವರು ಉತ್ತಮ ಗಾಯಕಿ, ಮ್ಯೂಸಿಕ್ ಕಂಪೋಸರ್ ಕೂಡ ಹೌದು. ಇತ್ತೀಚೆಗೆ ಇವರು ತೆಲುಗಿನಲ್ಲಿ ಅಭಿನಯಿಸಿದ ಎರಡು ಸಿನಿಮಾ ವಾಲ್ಟರ್ ವೀರಯ್ಯ ಮತ್ತು ವೀರಸಿಂಹ ರೆಡ್ಡಿ ಎರಡು ಸಿನಿಮಾಗಳು ಒಂದೇ ವಾರ ಬಿಡುಗಡೆಯಾಗಿ ಯಶಸ್ಸು ಕಂಡಿದೆ. ಶ್ರುತಿ ಅವರಿಗೆ ಇನ್ನಷ್ಟು ಬೇಡಿಮೆ ಕೂಡ ಹೆಚ್ಚಾಗಿದೆ. ಇನ್ನು ಶ್ರುತಿ ಹಾಸನ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಈಗ 14 ವರ್ಷ ಕಳೆದಿದೆ.. ಇದನ್ನು ಓದಿ..Kannada News: ತೆಲುಗಿನಲ್ಲಿ ಭುಗಿಲೆದ್ದ ವಿವಾದ: ಬಾಲಯ್ಯಗೆ ತಲೆ ದಿಮ್ ಅನ್ನುವಂತೆ ಎದುರೇಟು ಕೊಟ್ಟ ನಾಗಾರ್ಜುನ. ನಾಲಿಗೆ ಹರಿಬಿಟ್ಟಿದ್ದ ಬಾಲಯ್ಯಗೆ ಬಿಗ್ ಶಾಕ್.

ಇವರು ಮೊದಲು ನಟಿಸಿದ್ದು ಹಿಂದಿಯ ಲಕ್ ಎನ್ನುವ ಸಿನಿಮಾದಲ್ಲಿ, ಈ ಸಿನಿಮಾ ತೆರೆಕಂಡು 14 ವರ್ಷ ಕಳೆದಿದೆ. ಶ್ರುತಿ ಹಾಸನ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುವಾಗ, ಅವರು ಗಾಯಕಿ ಎನ್ನುವ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಹೇಳಿದ್ದರಂತೆ, ನಾಯಕಿಯಾಗಿ ಎಂಟ್ರಿ ಕೊಡುತ್ತಿರುವವರಿಗೆ ಗಾಯಕಿ ಎಂದು ಹೇಳಿಕೊಳ್ಳುವುದು ಬೇಡ ಎಂದು ಕೆಲವರು ಹೇಳಿದ್ದರಂತೆ. ಆದರೆ ಶ್ರುತಿ ಅವರು ಆ ಮಾತುಗಳಿಗೆ ತಲೆಕೆಡಿಸಿಕೊಳ್ಳದೆ, ಇಂದು ಗಾಯಕಿಯಾಗಿ ಮತ್ತು ನಾಯಕಿಯಾಗಿ ಹೆಸರು ಮಾಡಿದ್ದಾರೆ. ಶ್ರುತಿ ಹಾಸನ್ ಅವರ ಕೆರಿಯರ್ ಬಗ್ಗೆ ಹೇಳುವುದಾದರೆ, ಪ್ರಭಾಸ್ ಅವರ ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಶೀಘ್ರದಲ್ಲೇ ಇವರು ಮದುವೆ ಆಗುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಇದನ್ನು ಓದಿ..Kannada News: ಪವಿತ್ರ ಲೋಕೇಶ್ ರವರು ದಿಡೀರ್ ಎಂದು ಸುಚೇಂದ್ರ ಪ್ರಸಾದ್ ರವರ ಬಗ್ಗೆ ಹೇಳಿದ್ದೇನು ಗೊತ್ತೇ?? ಶಾಕ್ ಆದ ಜನತೆ.

Comments are closed.