Neer Dose Karnataka
Take a fresh look at your lifestyle.

Kannada News: ಎಲ್ಲದಕ್ಕಿಂತ ಮುಖ್ಯವಾದದ್ದು ನಿಮ್ಮ ಖುಷಿ ಎಂದು ಬಿಟ್ಟ ರಶ್ಮಿಕಾ. ಅಭಿಮಾನಿಗಳಿಗಾಗಿ ಏನು ಬೇಕಾದರೂ ಮಾಡಲು ಸಿದ್ದ. ಯಾಕಂತೆ ಗೊತ್ತೆ?

Kannada News: ನಟಿ ರಶ್ಮಿಕಾ ಮಂದಣ್ಣ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್, ಯಾವಾಗಲೂ ಒಂದಲ್ಲ ಒಂದು ಹೊಸ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಬೋಸ ಫೋಟೋಶೂಟ್ ಗಳು, ಜಾಹೀರಾತುಗಳ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ರಶ್ಮಿಕಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಹೊಸ ಫೋಟೋ ಒಂದನ್ನು ಶೇರ್ ಮಾಡಿ, ಅದಕ್ಕೆ ಕೆಲವು ಭರವಸೆಯ ನುಡಿಗಳನ್ನು ಹಂಚಿಕೊಂಡಿದ್ದು, ಈ ಫೋಟೋ ಈಗ ವೈರಲ್ ಆಗಿದೆ.

ನಟಿ ರಶ್ಮಿಕಾ ಮಂದಣ್ಣ ಅವರು ಈಗ ಒಂದು ಮುದ್ದಾಗಿರುವ ಫೋಟೋ ಶೇರ್ ಮಾಡಿದ್ದು, ಅದಕ್ಕೆ ಕ್ಯಾಪ್ಶನ್ ನಲ್ಲಿ, “ಎಲ್ಲಾ ಜನರೇ.. ನೀವು ಯಾವಾಗಲೂ ಖುಷಿಯಾಗಿರಿ..ಭರವಸೆ ಇಟ್ಟುಕೊಳ್ಳಿ.. ಇಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ನಿಮ್ಮ ನೆಮ್ಮದಿ ಮತ್ತು ಖುಷಿ… ನೆಗಟಿವ್ ಆಗಿ ಫೀಲ್ ಮಾಡುತ್ತಾ ಕೂರುವಷ್ಟು ಟೈಮ್ ಇಲ್ಲ.. ಲೈಫ್ ತುಂಬಾ ಚಿಕ್ಕದು..” ಎಂದು ಕ್ಯಾಪ್ಶನ್ ಬರೆದಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದು, ಈ ಫೋಟೋ ಅಪ್ಲೋಡ್ ಮಾಡಿ, 13 ಗಂಟೆಗಳಲ್ಲಿ 16 ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಮತ್ತು ನೂರಾರು ಕಮೆಂಟ್ಸ್ ಬಂದಿದೆ. ಇದನ್ನು ಓದಿ..Kannada News: ಆತನಿಗೆ ಹಲವಾರು ಜನ ಗರ್ಲ್ ಫ್ರೆಂಡ್ ಗಳು ಮೊದಲು ಇದ್ದರೂ ಕೂಡ ಸಿದ್ದಾರ್ಥ್ ಬೇಕು ಬೇಕು ಎಂದು ಕಿಯರ ಮದುವೆಯಾಗಿದ್ದು ಯಾಕೆ ಗೊತ್ತೇ?

ಇನ್ನು ರಶ್ಮಿಕಾ ಅವರ ಕೆರಿಯರ್ ಬಗ್ಗೆ ಹೇಳುವುದಾದರೆ, ಇತ್ತೀಚೆಗೆ ತೆರೆಕಂಡ ನಟ ವಿಜಯ್ ಅವರ ಜೊತೆಗೆ ರಶ್ಮಿಕಾ ಅವರು ಅಭಿನಯಿಸಿದ್ದ ವಾರಿಸು ಸಿನಿಮಾ ತೆರೆಕಂಡು ಸೂಪರ್ ಹಿಟ್ ಎನ್ನಿಸಿಕೊಂಡಿದೆ. ಹಾಗೆಯೇ ನೆಟ್ಫ್ಲಿಕ್ಸ್ ನಲ್ಲಿ ತೆರೆಕಂಡ ಮಿಷನ್ ಮಜ್ನು ಸಿನಿಮಾ ಒಳ್ಳೆಯ ಹೆಸರು ಪಡೆದಿದೆ. ಇದಲ್ಲದೆ ರಣಬೀರ್ ಕಪೂರ್ ಅವರೊಡನೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದು, ಪುಷ್ಪ2 ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಗೀತಾ ಗೋವಿಂದಂ ಸಿನಿಮಾ ಬರಲಿದ್ದು, ಅದಕ್ಕೂ ಇವರೇ ನಾಯಕಿಯಾಗಬಹುದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ಕನ್ನಡದ ಟಾಪ್ ನಟಿಗೆ ನೇರವಾಗಿ ಪ್ರೊಪೋಸ್ ಮಾಡಿ ತೆಲುಗಿನ ಎನ್ಟಿಆರ್ ಅಣ್ಣ ಕಲ್ಯಾಣ್ ರಾಮ್. ಬೆಚ್ಚಿಬಿದ್ದ ಪತ್ನಿ. ಏನಾಗಿದೆ ಗೊತ್ತೇ?

Comments are closed.