Neer Dose Karnataka
Take a fresh look at your lifestyle.

Pooja Hegde News: ಆತನಿಂದಾಗಿ ಪೂಜಾ ಹೆಗ್ಡೆ ರವರು ಅದೆಂತಹ ಪರಿಸ್ಥಿಗೆ ಬಂದಿದ್ದಾರೆ ಗೊತ್ತೇ?? ಕನ್ನಡತಿಗೆ ಇವೆಲ್ಲ ಬೇಕಿತ್ತಾ??

Pooja Hegde News: ನಟಿ ಪೂಜಾ ಹೆಗ್ಡೆ ಮೂಲತಃ ಕರ್ನಾಟಕದವರು, ಇವರು ಇಂದು ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದ್ದಾರೆ. ಪೂಜಾ ಹೆಗ್ಡೆ ಅವರು ಮೊದಲಿಗೆ ತೆಲುಗಿನ. ಮುಕುಂದ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾ ಅಟ್ಟರ್ ಫ್ಲಾಪ್ ಆಯಿತು, ಇದರಿಂದ ಆಕೆಗೆ ಐರನ್ ಲೆಗ್ ಎಂದು ಕರೆಯುತ್ತಿದ್ದರು. ಬಳಿಕ ಬಾಲಿವುಡ್ ಗೆ ಅದೃಷ್ಟ ಪರೀಕ್ಷೆಗೆ ಇಳಿದು, ನಟ ಹೃತಿಕ್ ರೋಷನ್ ಅವರೊಡನೆ ಒಂದು ಸಿನಿಮಾದಲ್ಲಿ ನಟಿಸಿದರು, ಆ ಸಿನಿಮಾ ಕೂಡ ಫ್ಲಾಪ್ ಆದ ಕಾರಣ ಪೂಜಾ ಹೆಗ್ಡೆ ಅವರಿಗೆ ಐರನ್ ಲೆಗ್ ಎಂದು ಟ್ರೋಲ್ಸ್ ಬರುವುದಕ್ಕೆ ಶುರುವಾಯಿತು. ನಟನೆ, ಸೌಂದರ್ಯ, ಪ್ರತಿಭೆ ಇದ್ದರು ಅದೃಷ್ಟ ಇಲ್ಲದೆ ಹೀಗಾಯಿತು.

ಬಳಿಕ ಇವರು ತೆಲುಗಿನಲ್ಲಿ ತ್ರಿವಿಕ್ರಂ ಶ್ರೀನಿವಾಸ್ ಮತ್ತು ಜ್ಯೂನಿಯರ್ ಎನ್ಟಿಆರ್ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಅರವಿಂದ ಸಮೇತ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾ ಸೂಪರ್ ಹಿಟ್ ಆದ ಕಾರಣ, ಪೂಜಾ ಅವರಿಗೆ ಒಳ್ಳೆಯ ಹೆಸರು ಮತ್ತು ಅವಕಾಶ ಎರಡು ಕೂಡ ಸಿಕ್ಕಿತು. ಬಳಿಕ ನಟಿಸಿದ ಅಲಾ ವೈಕುಂಠಪುರಮುಲೋ ಸಿನಿಮಾ ಇನ್ನು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. ಅಲ್ಲಿಂದ ಪೂಜಾ ಹೆಗ್ಡೆ ಲಕ್ ಬದಲಾಗಿ ಹೆಚ್ಚು ಅವಕಾಶಗಳು ಬರುವುದಕ್ಕೆ ಶುರುವಾದವು, ಅಷ್ಟೇ ಅಲ್ಲದೆ, ಹಿಟ್ ಸಿನಿಮಾಗಳಾಗಿದ್ದ ಕಾರಣ ಸಂಭಾವನೆ ಕೂಡ ಹೆಚ್ಚಾಯಿತು. ಬಹಳ ಕಡಿಮೆ ಸಮಯದಲ್ಲಿ ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದರು ಪೂಜಾ. ಇದನ್ನು ಓದಿ..Kannada News: ಎಷ್ಟೇ ಸಾವಿರ ಕೋಟಿ ಆಸ್ತಿ ಇದ್ದರೂ ನೆಮ್ಮದಿ ಇಲ್ಲ. ಅದೊಂದು ವಿಚಾರದಲ್ಲಿ ಇಂದಿಗೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಎನ್ಟಿಆರ್. ಏನಾಗಿದೆ ಗೊತ್ತೇ??

ಆದರೆ ಅವರ ಅದೃಷ್ಟ ಮತ್ತೊಮ್ಮೆ ಕೈಕೊಟ್ಟಿತು. ರಾಧೆ ಶ್ಯಾಮ್, ಬೀಸ್ಟ್ ಮತ್ತು ಆಚಾರ್ಯ ಸಿನಿಮಾಗಳು ಫ್ಲಾಪ್ ಆದ ಕಾರಣ ಪೂಜಾ ಅವರಿಗೆ ಮತ್ತೆ ಅವಕಾಶಗಳು ಕಡಿಮೆಯಾಗಿದೆ. ಫ್ಲಾಪ್ ಸಿನಿಮಾಗಳ ಕಾರಣ ಇವರಿಗೆ ಸಿಗುತ್ತಿರುವ ಸಂಭಾವನೆ ಕೂಡ ಕಡಿಮೆಯಾಗಿದೆ. ಪ್ರಸ್ತುತ ನಟ ಮಹೇಶ್ ಬಾಬು ಅವರ ಸಿನಿಮಾ ಬಿಟ್ಟು, ಇನ್ಯಾವುದೇ ಸಿನಿಮಾ ಅವಕಾಶಗಳು ಪೂಜಾ ಹೆಗ್ಡೆ ಅವರ ಕೈಯಲ್ಲಿ ಇಲ್ಲ. ಈ ಸಮಯದಲ್ಲಿ ಇವರು ತಮ್ಮ ಸಂಭಾವನೆಯನ್ನು ಇನ್ನಷ್ಟು ಕಡಿಮೆ ಮಾಡಿಕೊಂಡರೆ, ಬಹುಶಃ ಸಿನಿಮಾದಲ್ಲಿ ನಟಿಸುವ ಅವಕಾಶಗಳು ಸಿಗಬಹುದು. ಮುಂದಿನ ದಿನಗಳಲ್ಲಿ ಪೂಜಾ ಹೆಗ್ಡೆ ಕೆರಿಯರ್ ಏನಾಗುತ್ತೋ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಅಪ್ಪು ಯಶ್ ಮಾಡಲ್ಲ ಎಂದ ಸಿನಿಮಾ ಕಥೆಯನ್ನು ಒಪ್ಪಿಕೊಂಡ ಮತ್ತೊಬ್ಬ ನಟ; ಯಾರು ಗೊತ್ತೇ?? ಸಿನಿಮಾ ಕಥೆ ಏನು ಗೊತ್ತೇ??

Comments are closed.