Neer Dose Karnataka
Take a fresh look at your lifestyle.

Kannada News: ಹೆತ್ತವರು ಬೇಡ ಬೇಡ ಎಂದರೂ, ಪಾಶ್ರವಾಯು ಯುವಕನನ್ನು ಮದುವೆಯಾದ ಹುಡುಗಿಯ ಬಾಳಿನಲ್ಲಿ ಏನಾಗಿದೆ ಗೊತ್ತೇ? ಇಂತಹ ಪರಿಸ್ಥಿತಿ ಬೇಕಿತ್ತೆ??

Kannada News: ಕೇರಳ ರಾಜ್ಯದ ತಿರುವನಂಥಪುರಂನ ಜೋಡಿ ಸಹನ ಪ್ರಣವ್, ಇವರಿಬ್ಬರು ಬಹಳ ಸುದ್ದಿಯಾದ ಜೋಡಿ. ಪ್ರಣವ್ ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಮನೆಯವರೆಲ್ಲರೂ ಈ ಮದುವೆ ಬೇಡ ಎಂದು ಎಷ್ಟೇ ಹೇಳಿದರು ಕೇಳದೆ, ತನ್ನ ಪ್ರೀತಿಗೋಸ್ಕರ ಪ್ರಣವ್ ನನ್ನೇ ಮದುವೆ ಆಗಿದ್ದಳು ಸಹನ, ಇವರಿಬ್ಬರ ಪ್ರೀತಿಯನ್ನು ಜನರು ಕೂಡ ಮೆಚ್ಚಿಕೊಂಡಿದ್ದರು. ಸಹನಾಗೆ ಪ್ರೀತಿ ಮೇಲಿರುವ ಗೌರವಕ್ಕೆ ಎಲ್ಲರೂ ಸಂತೋಷಪಟ್ಟಿದ್ದರು. ಎಲ್ಲರಿಗೂ ಮಾದರಿಯಾಗಿದ್ದ ಈ ಜೋಡಿಯನ್ನು ವಿಧಿ ಈಗ ಬೇರೆ ಬೇರೆ ಮಾಡಿದೆ.

ಈ ಜೋಡಿಯ ಪರಿಚಯ ಆಗಿದ್ದು ಸೋಷಿಯಲ್ ಮೀಡಿಯಾ ಮೂಲಕ, ಇಬ್ಬರು ಪ್ರೀತಿಸಲ ಶುರು ಮಾಡಿದ್ದರು. ಆದರೆ 8 ವರ್ಷಗಳ ಹಿಂದೆ ನಡೆದ ಒಂದು ಅಪಘಾತದ ನಂತರ ಪ್ರಣವ್ ಗೆ ಸೊಂಟದ ಕೆಳಗಿನ ಭಾಗ ಪೂರ್ತಿಯಾಗಿ ಪಾರ್ಶ್ವವಾಯುವಿಗೆ ತುತ್ತಾಯಿತು. ಬೈಕ್ ಗೋಡೆಗೆ ಡಿಕ್ಕಿ ಹೊಡೆದು ಈ ರೀತಿ ಆಗಿತ್ತು, ಸಹನ ಇವರ ಜೊತೆಗೆ ಮದುವೆ ಆಗುವುದು ಯಾರಿಗೂ ಇಷ್ಟವಿರಲಿಲ್ಲ. ಆದರೆ ಪ್ರೀತಿಯೇ ಮುಖ್ಯ ಎಂದುಕೊಂಡ ಸಹನ ಪ್ರಣವ್ ನನ್ನೇ ಮದುವೆಯಾದರು. ಪ್ರಣವ್ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿದ್ದರು. ಇದನ್ನು ಓದಿ..Kannada News: ಮದುವೆಗೂ ಮುನ್ನವೇ ಎಲ್ಲವೂ ಮುಗಿಸಿ, ಪ್ರೇಗ್ನೆಂಟ್ ಆದ ಸೆಲೆಬ್ರೆಟಿಗಳು ಯಾರ್ಯಾರು ಗೊತ್ತೇ?? ಅದ್ಯಾಕೆ ಗೊತ್ತೇ??

ಪತ್ನಿ ಸಹನ ಜೊತೆಗೆ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ರಸ್ತೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಈ ಜೋಡಿ ಬಹಳ ಸಂತೋಷವಾಗಿತ್ತು. ಆದರೆ ಇವರು ಸಂತೋಷವಾಗಿ ಇರುವುದು ವಿಧಿಗೆ ಇಷ್ಟವಿರಲಿಲ್ಲ ಎಂದು ಅನ್ನಿಸುತ್ತದೆ. ನಿನ್ನೆ ಪ್ರಣವ್ ಇಹಲೋಕ ತ್ಯಜಿಸಿದ್ದಾರೆ. ಪ್ರಣವ್ ರಕ್ತ ವಾಂತಿ ಮಾಡಿಕೊಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ, ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಪ್ರಣವ್ ಕೊನೆಯುಸಿರೆಳೆದಿದ್ದಾರೆ. ಪ್ರೀತಿಗೆ ಪ್ರಣವ್ ಸಹನ ಎಂದು ಹೆಸರುವಾಸಿಯಾಗಿದ್ದ ಈ ಜೋಡಿಗೆ ಈಗ ವಿಧಿ ಮೋಸ ಮಾಡಿದೆ. ಇದನ್ನು ಓದಿ..Kannada News: ಮತ್ತೆ ಮುನ್ನೆಲೆಗೆ ಬಂದ ಪ್ರಥಮ್, ಈ ಬಾರಿ ಮತ್ತೊಮ್ಮೆ ದರ್ಶನ್ ರವರಿಗೆ ಹೇಳಿದ್ದೇನು ಗೊತ್ತೇ?? ದರ್ಶನ್ ಫ್ಯಾನ್ಸ್ ಅಂತೂ ಫುಲ್ ಗರಂ ಆಗಿದ್ದು ಯಾಕೆ ಗೊತ್ತೇ??

Comments are closed.