Neer Dose Karnataka
Take a fresh look at your lifestyle.

Kannada News: ಒಮ್ಮೆ ಹೇಳಿದರೆ ಕೇಳೋದಿಲ್ಲವೇ ಸಮಂತಾ?? ಬೇಡ ಬೇಡ ಎಂದರು ಮತ್ತದೇ ಕೆಲಸ ಮಾಡುತ್ತಿರುವುದು ಯಾಕೆ ಗೊತ್ತೆ? ಸ್ವಲ್ಪ ದಿನ ತಡೆದುಕೊಳ್ಳಿ.

Kannada News: ನಟಿ ಸಮಂತಾ ಅವರು ವಿಚ್ಛೇದನ ಪಡೆದು ಸಿಂಗಲ್ ಆದ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು ಅದರಲ್ಲಿ ಬ್ಯುಸಿ ಆಗಿದ್ದರು. ಆದರೆ ಮಧ್ಯದಲ್ಲಿ ಮಯೋಸೈಟಿಸ್ ಸಮಸ್ಯೆ ಶುರುವಾಗಿ ಎಲ್ಲದರಿಂದ ಬ್ರೇಕ್ ಪಡೆದುಕೊಂಡಿದ್ದರು. ಆದರೆ ಈಗ ಚೇತರಿಸಿಕೊಂಡು, ಶೂಟಿಂಗ್ ಗೆ ಕಂಬ್ಯಾಕ್ ಮಾಡಿದ್ದಾರೆ. ಸಮಂತಾ ಅವರು ಈಗ ಅಮೆಜಾನ್ ಪ್ರೈಮ್ ಗಾಗಿ ಒಂದು ವೆಬ್ ಸೀರೀಸ್ ನಲ್ಲಿ ನಟಿಸಲಿದ್ದಾರೆ, ಅದು ಬಾಲಿವುಡ್ ನ ಸಿಟಾಡೆಲ್. ಈ ಸೀರೀಸ್ ಮೇಲೆ ಭಾರಿ ನಿರೀಕ್ಷೆ ಇದೆ.
ಈ ಸೀರೀಸ್ ನ ಮೊದಲ ಶೆಡ್ಯೂಲ್ ಶೂಟಿಂಗ್ ಮುಗಿದಿದ್ದುಜ್ ಎರಡನೇ ಶೆಡ್ಯೂಲ್ ಉತ್ತರಾಖಂಡ್ ನಲ್ಲಿ ನಡೆಯಲಿದೆ..

ಇದು ಆಕ್ಷನ್ ಥ್ರಿಲ್ಲರ್ ವೆಬ್ ಸೀರೀಸ್ ಆಗಿರುವ ಕಾರಣ, ಸಮಂತಾ ಅವರು ಸ್ಟಂಟ್ಸ್ ಕಲಿಯಬೇಕಾಗಿದೆ. ಇದಕ್ಕಾಗಿ ಮೈಕೊರೆಯುವ ಚಳಿಯಲ್ಲಿ ಸಮಂತಾ ಅವರು ಸ್ಟಂಟ್ಸ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಈ ಸೀರೀಸ್ ಗೆ ಆಕ್ಷನ್ ಕೋರಿಯಾಗ್ರಫಿ ಮಾಡುತ್ತಿರುವ ಯಾನಿಮ್ ಬೆನ್ ಅವರ ನೇತೃತ್ವದಲ್ಲಿ ಸಮಂತಾ ಅವರು ಆಕ್ಷನ್ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಸಮಂತಾ ಅವರಿಗೆ ಕೆಲಸದ ಎಷ್ಟು ಶ್ರದ್ಧೆ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ. ವೃತ್ತಿ ಮೇಲೆ ಅವರಿಗೆ ಇರುವ ಪ್ರಾಮಾಣಿಕತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆ ಚಳಿಯಲ್ಲಿ ಪ್ರಾಕ್ಟೀಸ್ ಮಾಡುತ್ತಿರುವುದು ನಿಜಕ್ಕೂ ಗ್ರೇಟ್ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..ಕುದ್ದು ಅಂಬರೀಷ್ ರವರು ವಿಷ್ಣು ಸರ್ ರವರ ಮನೆಗೆ ಊಟಕ್ಕೆ ಬಂದಾಗ ಅಲ್ಲಿ ನಡೆದದ್ದು ಏನು ಗೊತ್ತೇ? ಅಂಬರೀಷ್ ಮಾತು ಕೇಳಿ, ವಿಷ್ಣು ಏನು ಮಾಡಿದ್ದರು ಗೊತ್ತೇ??

ಮಯೋಸೈಟಿಸ್ ಗೆ ಗುರಿಯಾದ ಸಮಂತಾ ಅವರು ಕೆಲ ಸಮಯ ಶೂಟಿಂಗ್ ಗೆ ಬ್ರೇಕ್ ಹಾಕಿ, ವಿಶ್ರಾಂತಿ ಪಡೆದರು. ಈಗ ಪೂರ್ತಿಯಾಗಿ ಚೇತರಿಸಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ಚಿತ್ರೀಕರಣಕ್ಕೆ ಹಾಜರ್ ಆಗಿದ್ದಾರೆ. ಶಾಕುಂತಲಂ ಸಿನಿಮಾವನ್ನು ಮುಗಿಸಿದ್ದು ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಹಾಗೆಯೇ ಖುಷಿ ಸಿನಿಮಾ ಕೆಲಸಗಳು ಸಹ ಬಹುತೇಕ ಮುಗಿದಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಸಮಂತಾ ಅವರು ವರ್ಕೌಟ್ ನಲ್ಲಿ ಇಷ್ಟು ಸ್ಟ್ರೇನ್ ಮಾಡಿಕೊಳ್ಳುತ್ತಿರುವುದಕ್ಕೆ ಅವರ ಅಭಿಮಾನಿಗಳು ಭಯ ಆರೋಗ್ಯದ ಮೇಲೆ ಗಮನ ಇರಲಿ ಎಂದು ಭಯ ಪಡುತ್ತಿದ್ದಾರೆ. ಇದನ್ನು ಓದಿ..Kannada News: ದರ್ಶನ್ ಜೊತೆ ಹೊಸ ಸಿನಿಮಾದಲ್ಲಿ ನಟನೆ ಮಾಡಲು ಮಾಲಶ್ರೀ ಮಗಳಿಗೆ ಕೊಡುತ್ತಿರುವ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ??

Comments are closed.