Neer Dose Karnataka
Take a fresh look at your lifestyle.

Kannada News: ಕೊನೆಗೂ ಬಿಡುಗಡೆಯಾಯ್ತು ಧಾರಾವಾಹಿಗಳ ಟಿಆರ್ಪಿ ಲಿಸ್ಟ್; ಈ ಬಾರಿ ಗೆದ್ದವರು ಯಾರ್ಯಾರು ಗೊತ್ತೇ? ಶ್ರೀರಸ್ತು ಧಾರಾವಾಹಿಗೆ ಶಾಕ್. ಏನಾಗಿದೆ ಗೊತ್ತೇ?

Kannada News: ಮನೆಯಲ್ಲಿರುವ ವೀಕ್ಷಕರಿಗೆ ಮನರಂಜನೆ ಕೊಡುವುದು ಧಾರವಾಹಿಗಳು. ಕನ್ನಡದಲ್ಲಿ ಕಲರ್ಸ್ ಕನ್ನಡ, ಜೀಕನ್ನಡ, ಸ್ಟಾರ್ ಸುವರ್ಣ, ಉದಯ ಟಿವಿ ಹೀಗೆ ಪ್ರಮುಖ ವಾಹಿನಿಗಳಲ್ಲಿ ಪ್ರಸಾರವಾಗುವ ಸೀರಿಯಲ್ ಗಳನ್ನು ವೀಕ್ಷಕರು ನೋಡುತ್ತಾರೆ. ಯಾವ ಸೀರಿಯಲ್ ಎಷ್ಟರ ಮಟ್ಟಕ್ಕೆ ಜನಪ್ರಿಯತೆ ಪಡೆದುಕೊಂಡಿದೆ ಎನ್ನುವುದು ಗೊತ್ತಾಗುವುದು ಪ್ರತಿವಾರ ಬಿಡುಗಡೆ ಆಗುವ ಟಿಆರ್ಪಿ ಲಿಸ್ಟ್ ಇಂದ. ಈ ವಾರ ಯಾವ ಸೀರಿಯಲ್ ಯಾವ ಸ್ಥಾನದಲ್ಲಿದೆ ಗೊತ್ತಾ? ಶ್ರೀರಸ್ತು ಶುಭಮಸ್ತು ಧಾರವಾಹಿಗೆ ಬಿಗ್ ಶಾಕ್ ಸಿಕ್ಕಿದೆ.

ಮೊದಲ ಸ್ಥಾನ ಪಡೆದುಕೊಂಡಿರುವುದು ಎಂದಿನಂತೆ ಪುಟ್ಟಕ್ಕನ ಮಕ್ಕಳು ಧಾರವಾಹಿ. ಪುಟ್ಟಕ್ಕನ ಮಗಳ ಮದುವೆ ಸಂಭ್ರಮ ನಡೆಯುತ್ತಿತ್ತು, ಈ ವಾರ ಕೂಡ ಮದುವೆ ನಂತರದ ಭಾವನಾತ್ಮಕ ದೃಶ್ಯಗಳು ಪ್ರಸಾರವಾಗಿ ಜನರಿಗೆ ಇಷ್ಟವಾಗಿದೆ. ಎರಡನೇ ಸ್ಥಾನದಲ್ಲಿ ವೇದ್ಯ ಲವ್ ಸ್ಟೋರಿ ಗಟ್ಟಿಮೇಳ ಧಾರಾವಾಹಿ ಇದೆ. ಈ ಧಾರವಾಹಿಯಲ್ಲಿ ಇತ್ತೀಚೆಗೆ ಸ್ಟೋರಿ ಸಾಗುತ್ತಿರುವ ರೀತಿ ಜನರಿಗೆ ಇಷ್ಟವಾಗಿದೆ. ಮೂರನೇ ಸ್ಥಾನದಲ್ಲಿ ಇರುವುದು ಶ್ರೀರಸ್ತು ಶುಭಮಸ್ತು ಧಾರವಾಹಿ, ತುಳಸಿ ಮಾಧವ್ ಸ್ನೇಹ, ದತ್ತಣ್ಣ ಅವರ ಪಾತ್ರ ಜನರಿಗೆ ಬಹಳ ಇಷ್ಟವಾಗಿದ್ದು, ಹೆಚ್ಚು ಜನರು ಧಾರವಾಹಿ ನೋಡೋದಕ್ಕೆ ಶುರು ಮಾಡಿದ್ದಾರೆ.. ಇದನ್ನು ಓದಿ..Film News: ದಕ್ಷಿಣ ಭಾರತವನ್ನೇ ಶೇಕ್ ಶೇಕ್ ಮಾಡುತ್ತಿರುವ ಈ ಬಾಲಕಿ, ಈಗ ದೊಡ್ಡ ಬೆಣ್ಣೆಯಂತಹ ನಾಯಕಿ. ಯಾರು ಗೊತ್ತಾಯ್ತ?? ನಾವು ತಿಳಿಸುತ್ತೇವೆ ನೋಡಿ.

ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಕೂಡ ಮೂರನೇ ಸ್ಥಾನದಲ್ಲಿದೆ, ಲಕ್ಷ್ಮಿ ಮದುವೆ ಎಪಿಸೋಡ್ ನಲ್ಲಿ ಸಿಗುತ್ತಿರುವ ಥ್ರಿಲ್ ಮತ್ತು ಟ್ವಿಸ್ಟ್ ಅನ್ನು ಜನರು ತಪ್ಪದೇ ನೋಡುತ್ತಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಹಿಟ್ಲರ್ ಕಲ್ಯಾಣ ಧಾರವಾಹಿ ಇದೆ, ಎಜೆ ಲವ್ವರ್ ಬಾಯ್ ಲುಕ್ ಲೀಲಾ ಮೇಲೆ ಇರುವ ಪ್ರೀತಿಯನ್ನು ಜನರು ಕೂಡ ಎಂಜಾಯ್ ಮಡುತ್ತಿದ್ದಾರೆ. ಐದನೇ ಸ್ಥಾನದಲ್ಲಿ ಜೀಕನ್ನಡ ವಾಹಿನಿಯ ಸತ್ಯ ಸೀರಿಯಲ್ ಸೇರಿದೆ. ಸತ್ಯ ಮತ್ತೆ ಹಳೆ ಗೆಟಪ್ ನಲ್ಲಿ ಕಾಣಿಸಿಕೊಂಡಿರುವುದು ವೀಕ್ಷಕರಿಗೆ ಇಷ್ಟವಾಗಿದೆ. ಆರನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಧಾರವಾಹಿ ಇದೆ, ಚಾರು ರಾಮಾಚಾರಿ ಮದುವೆ ಯಾರಿಗೂ ಗೊತ್ತಾಗದೆ ಹಾಗೆ ನಡೆದುಹೋಗಿದೆ. ಇದನ್ನು ಓದಿ..Film News: ತಿಳಿಯದೇ ಅಂದು ಆ ತಪ್ಪು ಮಾಡಿಬಿಟ್ಟೆ ಎಂದು ಒಪ್ಪಿಕೊಡ ರಶ್ಮಿ; ಈಗ ಬಿಟ್ಟು ಬಿಟ್ಟಿದ್ದರಂತೆ. ಇದು ಸರೀನಾ??

Comments are closed.