Neer Dose Karnataka
Take a fresh look at your lifestyle.

Film News: ಮತ್ತೆ ಉಲ್ಟಾ ಹೊಡೆದ ಚಿರು: ಸ್ವಂತ ಮಗನ ವಿರುದ್ಧವೇ, ಆತನಿಗೆ ಮಾತ್ರ ಕೊಡಬೇಡಿ ಎಂದು ನೇರವಾಗಿ ಹೇಳಿದ್ದೇನು ಗೊತ್ತೇ??

Film News: ಬಹಳಷ್ಟು ವರ್ಷಗಳಿಂದ ನಮ್ಮ ಭಾರತ ಚಿತ್ರರಂಗಕ್ಕೆ ಆಸ್ಕರ್ ಅವಾರ್ಡ್ ಬರಬೇಕು ಎನ್ನುವುದು ಎಲ್ಲರ ಕನಸಾಗಿತ್ತು, ಇದೀಗ ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿನ ಮೂಲಕ ಅದು ನಿಜವಾಗಿದೆ. ಭಾನುವಾರ ಸಂಜೆ ನಡೆದ ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲಿ ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಬೆಸ್ಟ್ ಒರಿಜಿನಲ್ ಸಾಂಗ್ ಅವಾರ್ಡ್ ಬಂದಿದೆ. ಈ ಒಂದು ಅವಾರ್ಡ್ ಇಡೀ ಭಾರತಕ್ಕೆ ಹೆಮ್ಮೆ ತಂದಿದೆ ಎಂದು ಹೇಳಬಹುದು.

ಇಡೀ ಭಾರತ ಚಿತ್ರರಂಗವೇ, ಆರ್.ಆರ್.ಆರ್ ತಂಡಕ್ಕೆ ಅಭಿನಂದನೆ ಶುಭಾಶಯ ಸಲ್ಲಿಸುತ್ತಿದೆ. ಯುಎಸ್ ನಲ್ಲಿ ಕಾರ್ಯಕ್ರಮ ನಡೆದು, ಆರ್.ಆರ್.ಆರ್ ತಂಡಕ್ಕೆ ಅವಾರ್ಡ್ ಬಂದಾಗ, ಅಲ್ಲಿನ ಬ್ರಾಡ್ ಕಾಸ್ಟಿಂಗ್ ಅವರು ಮೆಗಾಸ್ಟಾರ್ ಚಿರಂಜೀವಿ ಅವರನ್ನು ಮಾತನಾಡಿಸಿ, ಅವಾರ್ಡ್ ಬಗ್ಗೆ ಪ್ರತಿಕ್ರಿಯೆ ಕೇಳಿದರು. ಅದಕ್ಕೆ ಚಿರಂಜೀವಿ ಅವರು ಉತ್ತರ ಕೊಟ್ಟಿದ್ದು, ಎಲ್ಲಾ ಕ್ರೆಡಿಟ್ಸ್ ಚರಣ್ ಒಬ್ಬನಿಗೆ ಕೊಡಲು ಆಗುವುದಿಲ್ಲ, ಆಸ್ಕರ್ ಗಾಗಿ ಎಲ್ಲರೂ ತುಂಬಾ ಕಷ್ಟಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ಓದಿ..Film News: ಹೌದು, ಅವಕಾಶಕ್ಕಾಗಿ ಆ ಕೆಲಸ ಮಾಡಿದರೆ ತಪ್ಪೇನು?? ನೇರವಾಗಿಯೇ ಪಲ್ಲಂಗದ ವಿಷಯದ ಬಗ್ಗೆ ನಟಿ ಹೇಳಿಕೆ. ಷಾಕಿಂಗ್ ಹೇಳಿಕೆ ಏನು ಗೊತ್ತೇ?

ತಮ್ಮ ಮಗನನ್ನು ಮಾತ್ರ ಹೊಗಳದೆ, ಇಡೀ ತಂಡವನ್ನು ಚಿರಂಜೀವಿ ಅವರು ಹೊಗಳಿರುವುದಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿಂದೆ ನಡೆದ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅವತಾರ್ ಸಿನಿಮಾ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರು, ಆರ್.ಆರ್.ಆರ್ ಸಿನಿಮಾ ವಿಷಯಕ್ಕೆ ರಾಮ್ ಚರಣ್ ಅವರನ್ನು ಮಾತ್ರ ಹೊಗಳುವ ಮೂಲಕ ಟ್ರೋಲ್ ಗೆ ಒಳಗಾಗಿದ್ದರು. ಎನ್ಟಿಆರ್ ಅವರ ಅಭಿಮಾನಿಗಳು ಜ್ಯೂನಿಯರ್ ಎನ್ಟಿಆರ್ ಅವರು ಕೂಡ ಆರ್.ಆರ್.ಆರ್ ಸಿನಿಮಾದಲ್ಲಿ ಅಷ್ಟೇ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದು ಕಿಡಿಕಾರಿದ್ದರು. ಆದರೆ ಈಗ ಚಿರಂಜೀವಿ ಅವರ ಮಾತಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನು ಓದಿ..Film News: ತಾನು ಸಿನೆಮಾಗೆ ಎಷ್ಟು ಪಡೆಯುತ್ತೇನೆ ಎಂದು ಬಹಿರಂಗವಾಗಿ ಘೋಷಣೆ ಮಾಡಿದ ಪವನ್: ಸಂಭಾವನೆ ಕೇಳಿ ನಡುಗಿದ ದೇಶ. ಎಷ್ಟು ಕೋಟಿ ಅಂತೇ ಗೊತ್ತೇ??

Comments are closed.