Neer Dose Karnataka
Take a fresh look at your lifestyle.

Film News: ಅಂದು ಗಂಡ ಕೈ ಕೊಟ್ಟಾಗ ಗರ್ಭಿಣಿಯಾಗಿದ್ದ ನಟಿ, ಈಗ ಹೇಗಿದ್ದಾರೆ ಗೊತ್ತೇ? ಮುಚ್ಚಾಕಿದ ಪ್ರಕರಣದ ಬಳಿಕ ಏನಾಗಿದೆ ಗೊತ್ತೇ??

Film News: ಕನ್ನಡದ ಆಕಾಶದೀಪ ಧಾರವಾಹಿ ಖ್ಯಾತಿಯ ನಟಿ ದಿವ್ಯ ಶ್ರೀಧರ್ ಬಗ್ಗೆ ಕೆಲವು ತಿಂಗಳುಗಳ ಹಿಂದೆ ಸುದ್ದಿಗಳು ಕೇಳಿಬಂದಿದ್ದವು. ತಮ್ಮ ಜೊತೆಗೆ ಸೀರಿಯಲ್ ನಲ್ಲಿ ನಟಿಸುತ್ತಿದ್ದ ಅರ್ನವ್ ಅವರೊಡನೆ ಮದುವೆ ಆಗಿರುವುದಾಗಿ ತಿಳಿಸಿದ್ದ ನಟಿ, ಗರ್ಭಿಣಿಯಾಗಿದ್ದು, ಅವರಿಗೆ ಬೇರೆ ಮಹಿಳೆಯ ಜೊತೆಗೆ ಸಂಬಂಧ ಇದೆ, ತನಗೆ ಗರ್ಭಿಣಿ ಆಗಿರುವಾಗಲು ತೊಂದರೆ ನೀಡಿದ್ದಾರೆ ಎಂದು ನಟ ಅರ್ನವ್ ವಿರುದ್ಧ ಆರೋಪ ಮಾಡಿದ್ದರು, ಮತ್ತೊಬ್ಬ ನಟಿಯ ಜೊತೆಗೆ ಕ್ಲೋಸ್ ಆಗಿರುವ ವಿಡಿಯೋ ಸಹ ಶೇರ್ ಮಾಡಿಕೊಂಡಿದ್ದರು.

ಇವರಿಬ್ಬರ ಜಗಳ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯೇ ಆಗಿತ್ತು. ದಿವ್ಯ ಅವರಿಗೆ ಅದಾಗಲೇ ಮದುವೆಯಾಗಿ ಒಂದು ಹೆಣ್ಣುಮಗು ಇದ್ದು, ಅರ್ನವ್ ಅವರೊಡನೆ ಎರಡನೇ ಮದುವೆ ಆಗಿದ್ದರು. ಇದೀಗ ದಿವ್ಯ ಅವರಿಗೆ 9 ತಿಂಗಳು ತುಂಬಿದ್ದು ತನ್ನನ್ನು ನೋಡಿಕೊಳ್ಳಲು ಯಾರು ಇಲ್ಲ, ಇನ್ನು 10 ದಿನಗಳಲ್ಲಿ ಡೆಲಿವರಿ ಆಗಲಿದೆ, ಹಣಕಾಸು ಇಲ್ಲ, ಜೊತೆಯಾಗಿ ಯಾರು ಇಲ್ಲ, ಹಾಗಾಗಿ ಈ ಸಮಯದಲ್ಲೂ ಕೆಲಸ ಮಾಡುವ ಪರಿಸ್ಥಿತಿ ಇದೆ ಎಂದು ನೋವು ತೋಡಿಕೊಂಡಿದ್ದಾರೆ. ಇದನ್ನು ಓದಿ..Kannada News: ಬಿಗ್ ನ್ಯೂಸ್: ಕಂಡಕ್ಟರ್ ಬೆಂ’ಕಿಗಾಹುತಿ ಕೇಸ್ ಗೆ ಊಹಿಸದ ತಿರುವುದು; ಪೊಲೀಸರಿಂದ ಭರ್ಜರಿ ಹೆಜ್ಜೆ. ಶಾಕ್ ಆದ ರಾಜ್ಯದ ಜನತೆ.

ಗಂಡ ಅರ್ನವ್ ಸರಿಯಿಲ್ಲ ಆತನಿಂದ ತುಂಬಾ ಜನರಿಗೆ ಮೋಸ ಆಗಿದೆ ಎಂದಿರುವ ದಿವ್ಯ ಅವರು, ಮಗು ಬೇಡ ಎಂದು ತುಂಬಾ ಜನ ಹೇಳಿದರು, ಒಂದು ಜೀವವನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ, ಈ ಮಗು ದೇವರು ಕೊಟ್ಟಿದ್ದು ಎಂದು ನಾನು ಮಗುವನ್ನು ಉಳಿಸಿಕೊಳ್ಳಬೇಕು ಎಂದುಕೊಂಡೆ. 4 ತಿಂಗಳು ಇರುವಾಗಲೇ ನಟನೆ ಇಂದ ಬ್ರೇಕ್ ಟೆಗೆದುಕೊಳ್ಳಬೇಕು ಎಂದುಕೊಂಡಿದ್ದೆ, ಆದರೆ ನನ್ನ ಪರಿಸ್ಥಿತಿ ಹೀಗಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಣ್ಣೀರು ಹಾಕಿದ್ದಾರೆ ದಿವ್ಯ ಶ್ರೀಧರ್. ಇದನ್ನು ಓದಿ..Kannada News: ಆಸ್ಕರ್ ನಲ್ಲಿ ಜಗತ್ತೇ ನಡುಗುವಂತೆ ಮಿಂಚಿದ್ದ ದೀಪಿಕಾ ಧರಿಸಿದ್ದ ಬಟ್ಟೆ ಬೆಲೆ ಎಷ್ಟು ಗೊತ್ತೇ? ತಿಳಿದರೆ ಅಂಗೇ ಮೈ ಜುಮ್ ಅನ್ನುತ್ತದೆ.

Comments are closed.