Neer Dose Karnataka
Take a fresh look at your lifestyle.

Kannada News: ಪ್ರೀತಿ ಮಾಡಿದರೆ ಜುಮ್ ಜುಮ್ ಮಾಯಾ ಆಗಿಯೇ ಬಿಡುತ್ತ?? ಕೇವಲ ಹುಡುಗಿ ಮಾತಾಡುತ್ತಿಲ್ಲ ಎಂದು ಈ ಸಾಫ್ಟ್ವೇರ್ ಉದ್ಯೋಗಿ ಏನು ಮಾಡಿದ್ದಾನೆ ಗೊತ್ತೇ??

Kannada News: ಈಗಿನ ಕಾಲದ ಯುವ ಪೀಳಿಗೆಯವರು ಸಣ್ಣ ಪುಟ್ಟ ಕಾರಣಗಳಿಗೆ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಪ್ಪ ಅಮ್ಮ ಬೈದಿದ್ದಕ್ಕೆ, ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಇಂದ ಮೋಸ ಹೋಗಿದ್ದಕ್ಕೆ ಹೀಗೆ ಜೀವನದಲ್ಲಿ ಮುಖ್ಯ ಅನ್ನಿಸದೆ ಅದೆಷ್ಟೋ ವಿಷಯಗಳನ್ನು ದೊಡ್ಡ ಕಷ್ಟ ಎಂದುಕೊಂಡು, ಜೀವನವನ್ನೇ ಮುಗಿಸುವ ಮಟ್ಟಕ್ಕೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇಲ್ಲೊಬ್ಬ ಸಾಫ್ಟ್ ವೇರ್ ಇಂಜಿನಿಯರ್ ಸಹ ತನ್ನ ಗರ್ಲ್ ಫ್ರೆಂಡ್ ಮಾತನಾಡುತ್ತಿಲ್ಲ ಎಂದು ಎಂಥಹ ನಿರ್ಧಾರ ತೆಗೆದುಕೊಂಡಿದ್ದಾನೆ ಗೊತ್ತಾ?

ಈ ಘಟನೆ ನಡೆದಿರುವುದು ಸಂಗಾರೆಡ್ಡಿ ಜಿಲ್ಲೆಯ ಸದಾಶಿವಪೇಟೆ ತಾಲೂಕಿನ, ಆರ್ಮೂರಿನಲ್ಲಿ. ಈ ಹುಡುಗನ ಹೆಸರು ಅಖಿಲ್, ಇವನಿಗೆ 28 ವರ್ಷ, ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಅಖಿಲ್ ಒಬ್ಬ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದ, ಆ ಹುಡುಗಿಗೂ ಅಖಿಲ್ ಮೇಲೆ ಪ್ರೀತಿ ಇತ್ತು. ಇಬ್ಬರು ಗಂಟೆಗಟ್ಟಲೆ ಫೋನ್ ನಲ್ಲಿ ಮಾತನಾಡುತ್ತಾ ಚೆನ್ನಾಗಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಕೆಲವು ದಿನಗಳಿಂದ ಆ ಹುಡುಗಿ ಅಖಿಲ್ ಜೊತೆಗೆ ಫೋನ್ ನಲ್ಲಿ ಮಾತನಾಡುವುದನ್ನೇ ನಿಲ್ಲಿಸಿದ್ದಾಳೆ. ಅಖಿಲ್ ಎಷ್ಟೆ ಪ್ರಯತ್ನ ಪಟ್ಟರು ಆ ಹುಡುಗಿ ಸಂಪರ್ಕಕ್ಕೆ ಸಿಕ್ಕಿಲ್ಲ. ಇದನ್ನು ಓದಿ..Kannada News: ಗಂಡನನ್ನು ಬಿಟ್ಟು ಬೇರೆಯವನ ಜೊತೆ ತೈಯಾ ತಕ್ಕ ಎಂದು ಕುಣಿಯುತ್ತ ಎಲ್ಲವನ್ನು ಮಾಡಿದಳು, ಕೊನೆಗೆ ಗಂಡ ಅಡ್ಡ ಬಂದಾಗ ಏನಾಯ್ತು ಗೊತ್ತೇ?

ಸಾಲದೆ ಅಖಿಲ್ ನಂಬರ್ ಅನ್ನೇ ಬ್ಲಾಕ್ ಮಾಡಿಬಿಟ್ಟಿದ್ದಾಳೆ. ಇದ್ದಕ್ಕಿದ್ದ ಹಾಗೆ ತನ್ನ ಹುಡುಗಿ ಹೀಗೆ ಮಾಡಿದ್ದಕ್ಕೆ ಮನನೊಂದ ಅಖಿಲ್ ಗಚ್ಚಿಬೌಲಿಯಲ್ಲಿ ಇರುವ, ಲಾಡ್ಜ್ ಒಂದಕ್ಕೆ ಹೋಗಿ, ತನ್ನ ಉಸಿರನ್ನೇ ನಿಲ್ಲಿಸಿಕೊಂಡಿದ್ದಾನೆ. ಈ ವಿಚಾರ ಅವನ ತಂದೆ ತಾಯಿಗೆ ಗೊತ್ತಾಗಿ, ಚೆನ್ನಾಗಿ ಬದುಕಬೇಕಿದ್ದ ಮಗ ಹೀಗೆ ಮಾಡಿಕೊಂಡಿದ್ದಾನೆ ಎಂದು ಕಣ್ಣೀರು ಹಾಕಿದ್ದಾರೆ. ಪೊಲೀಸರಿಗೆ ಮಾಹಿತಿ ಹೋಗಿ, ಅವರು ಸ್ಥಳಕ್ಕೆ ಬಂದು, ಪರಿಶೀಲನೆ ನಡೆಸಿ, ಅಖಿಲ್ ದೇಹವನ್ನು ಪರೀಕ್ಷೆಗೆ ಕಳಿಸಿದ್ದಾರೆ, ಇತ್ತ ಅಖಿಲ್ ತಂದೆ ತಾಯಿ ತಮ್ಮ ಮಗ ಹೀಗೆ ಮಾಡಿಕೊಳ್ಳುವುದರ ಹಿಂದೆ ಏನೋ ಸಂಚು ನಡೆದಿದೆ ಎಂದು ಆರೋಪ ಮಾಡುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನು ಓದಿ..Kannada Story: ಸಾಂಪ್ರದಾಯಿಕ ಕುಟುಂಬ ಎಂದು ತಾನೇ ಹಣ ಹಾಕಿ ಮದುವೆ ಮಾಡಿಕೊಂಡ ಬಂದ ಉದ್ಯೋಗಿ: ಒಳ್ಳೆ ಕೆಲಸದ ಒಳ್ಳೆ ಹೆಂಡತಿ ಅಂಕೋದ್ರೆ, ನವರಂಗಿ ಆಟ ಆಡಿ ಏನು ಮಾಡಿದ್ದಾರೆ ಗೊತ್ತೇ??

Comments are closed.