Neer Dose Karnataka
Take a fresh look at your lifestyle.

Kannada News: ತನಗಿರುವ ಆರೋಗ್ಯ ಸಮಸ್ಯೆ ಕುರಿತು ಎಲ್ಲವನ್ನು ಬಿಚ್ಚಿಟ್ಟ ಸಮಂತಾ, ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ?? ಅಸಲಿಗೆ ನಿಜಕ್ಕೂ ಏನಾಗಿತ್ತು ಅಂತೇ ಗೊತ್ತೇ?

Kannada News: ನಟಿ ಸಮಂತಾ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ, ದಕ್ಷಿಣ ಭಾರತ ಚಿತ್ರರಂಗದಲ್ಲಿ ನಂಬರ್ 1 ಸ್ಟಾರ್ ಹೀರೋಯಿನ್ ಆಗಿರುವ ಸಮಂತಾ ಅವರು, ಈಗ ಬಾಲಿವುಡ್ ನಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಸಮಂತಾ ಅವರು ವೈವಾಹಿಕ ಜೀವನದಲ್ಲಿ ವಿಚ್ಛೇದನ ಪಡೆದ ನಂತರ ಮಯೋಸೈಟಿಸ್ ಆರೋಗ್ಯ ಸಮಸ್ಯೆಗೆ ಗುರಿಯಾದರು, ಆ ಕಾರಣದಿಂದ ಹಲವು ತಿಂಗಳುಗಳ ಕಾಲ ಸಮಂತಾ ಅವರು ಎಲ್ಲಿಯೂ ಹೊರಗಡೆ ಕಾಣಿಸಿಕೊಂಡಿರಲಿಲ್ಲ. ಯಶೋಧ ಸಿನಿಮಾ ಬಿಡುಗಡೆಗೆ ಕೆಲವೆ ದಿನಗಳು ಇರುವಾಗ ಈ ವಿಚಾರ ತಿಳಿಸಿದ್ದರು ಸ್ಯಾಮ್..

ಸಮಂತಾ ಅವರು ಈಗ ಮಹಿಳಾ ಪ್ರಧಾನ ಸಿನಿಮಾಗಳು, ವೆಬ್ ಸೀರೀಸ್ ಎಂದು ಬ್ಯುಸಿ ಆಗಿದ್ದಾರೆ. ಇದೀಗ ಏಪ್ರಿಲ್ 14ರಂದು ಸಮಂತಾ ಅವರ ಶಾಕುಂತಲಂ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಆಗಿರುವ ಸಮಂತಾ ಅವರು ಈಗ ಇಂಟರ್ವ್ಯೂಗಳಲ್ಲಿ ಕೂಡ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲಿ ತಮ್ಮ ಆರೋಗ್ಯದ ಬಗ್ಗೆ ಹಲವು ವಿಚಾರಗಳನ್ನು ತಿಳಿಸಿದ್ದಾರೆ ಸ್ಯಾಮ್. “ಮಯೋಸೈಟಿಸ್ ಶುರುವಾದ ಸಮಯದಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಿದೆ, ಮಯೋಸೈಟಿಸ್ ಇರುವಾಗಲೇ ಯಶೋಧ ಸಿನಿಮಾ ಮಾಡಿದೆ. ಅದೇ ಕಾರಣಕ್ಕೆ ಯಶೋದ ಸಿನಿಮಾ ರಿಲೀಸ್ ಸಮಯದಲ್ಲಿ ಇಂಟರ್ವ್ಯೂ ಕೊಡಲು ಆಗಲಿಲ್ಲ. ಇದನ್ನು ಓದಿ..Kannada News: ಧನುಷ್ ಅಲ್ಲವೇ ಅಲ್ಲಾ, ಪಾನ್ ಇಂಡಿಯಾ ಸ್ಟಾರ್ ನೊಂದಿಗೆ ಮದುವೆ ಆಗುತ್ತಿರುವ ನಟಿ ಮೀನಾ: ಬಹಿರಂಗವಾಗಿಯೇ ಬಂದ ಸುದ್ದಿ ಏನು ಗೊತ್ತೇ??

ಶಾಕುಂತಲಂ ಸಿನಿಮಾ ಕಥೆಯನ್ನು ಗುಣಶೇಕರ್ ಅವರು ಹೇಳಿದಾಗ, ನನಗೆ ಈ ಪಾತ್ರವನ್ನು ನಾನು ಮಾಡುತ್ತೇನೆ ಎಂದು ಆತ್ಮವಿಶ್ವಾಸ ಇರಲಿಲ್ಲ, ದಿ ಫ್ಯಾಮಿಲಿ ಮ್ಯಾನ್2 ವೆಬ್ ಸೀರೀಸ್ ನಂತರ ನನ್ನಲ್ಲಿ ಆತ್ಮವಿಶ್ವಾಸ ಬೆಳೆಯಿತು. ಮಯೋಸೈಟಿಸ್ ಇರುವಾಗಲೇ ಶಾಕುಂತಲಂ ಸಿನಿಮಾ ಮಾಡಿದೆ..” ಎಂದು ಹೇಳಿದ್ದಾರೆ ಸ್ಯಾಮ್. ಇನ್ನು ಶಾಕುಂತಲಂ ಸಿನಿಮಾಗಾಗಿಯೇ ವಿಶೇಷವಾದ ಡಯೆಟ್ ಫಾಲೋ ಮಾಡಿದ್ದಾಗಿಯು ಜೊತೆಗೆ ವಿಶೇಷವಾಗಿ ವರ್ಕೌಟ್ ಕೂಡ ಮಾಡಿದ್ದಾಗಿಯೂ ತಿಳಿಸಿದ್ದಾರೆ. ಮಯೋಸೈಟಿಸ್ ಇರುವಾಗಲೇ ಸಮಂತಾ ಅವರು ಇಷ್ಟೆಲ್ಲಾ ಮಾಡಿರುವುದು ನಿಜಕ್ಕೂ ಗ್ರೇಟ್ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Kannada News: ಧಾರವಾಹಿ ಲೋಕದಲ್ಲಿ ಮಹಾ ಸಂಚಲನ ಸೃಷ್ಟಿಸಿದ ಭಾಗ್ಯ ಲಕ್ಷ್ಮಿ – ಲಕ್ಷ್ಮಿ ಬಾರಮ್ಮ. ಈ ವಾರ ಟಿ ಆರ್ ಪಿ ಲೋಕದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಗೊತ್ತೇ??

Comments are closed.