Neer Dose Karnataka
Take a fresh look at your lifestyle.

ಕೊನೆಗೂ ಸಿಕ್ಕೇ ಬಿಡ್ತು ಕಾರಣ: ಭಾಗ್ಯಲಕ್ಷ್ಮಿ ಧಾರವಾಹಿ ಬಿಟ್ಟಿದ್ದಕ್ಕೆ ತಾನೇ ಬಂದು ಕಾರಣ ಹೇಳಿದ ನಟಿ ಗೌತಮಿ ಗೌಡ: ಉತ್ತಮ ಪಾತ್ರ ಬಿಟ್ಟಿದ್ದು ಯಾಕೆ ಗೊತ್ತೇ?

ಭಾಗ್ಯಲಕ್ಷ್ಮಿ ಧಾರವಾಹಿ ನೋಡುವ ವೀಕ್ಷಕರಿಗೆ ಒಂದೆರಡು ದಿನಗಳಿಂದ ಶಾಕ್ ಆಗಿದೆ. ಅದೇಕೆ ಎಂದರೆ, ಭಾಗ್ಯಳ ಗಂಡನನ್ನು ಬಾಯ್ ಫ್ರೆಂಡ್ ಮಾಡಿಕೊಂಡಿರುವ ಶ್ರೇಷ್ಠ, ಭಾಗ್ಯಳ ಜೀವನ ನಾಶ ಮಾಡಬೇಕು ಎಂದುಕೊಂಡಿದ್ದ ಶ್ರೇಷ್ಠ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಗೌತಮಿ ಅವರು ಈಗ ಇದ್ದಕ್ಕಿದ್ದ ಹಾಗೆ ಧಾರವಾಹಿ ಇಂದ ಹೊರನಡೆದಿದ್ದಾರೆ. ಶ್ರೇಷ್ಠ ಪಾತ್ರ ನೆಗಟಿವ್ ಆಗಿದ್ದರು ಸಹ ಜನರಿಗೆ ಇಷ್ಟವಾಗಿತ್ತು..

ಶ್ರೇಷ್ಠ ಪಾತ್ರದಲ್ಲಿ ಗೌತಮಿ ಅವರ ಅಭಿನಯ ಕೂಡ ಅಷ್ಟೇ ಅದ್ಭುತವಾಗಿತ್ತು ಎನ್ನಬಹುದು. ಶ್ರೇಷ್ಠ ಪಾತ್ರ ಗೌತಮಿ ಅವರು ಒಳ್ಳೆಯ ಹೆಸರು ಮತ್ತು ಫ್ಯಾನ್ ಬೇಸ್ ಎರಡನ್ನು ಹೊಂದಿದ್ದರು. ಆದರೆ ಈಗ ಇದ್ದಕ್ಕಿದ್ದ ಹಾಗೆ ಗೌತಮಿ ಅವರು ಪಾತ್ರದಿಂದ ಹೊರಬಂದಿದ್ದಕ್ಕೆ ಅಭಿಮಾನಿಗಳಿಗೆ ಅದರ ಬಗ್ಗೆ ಪ್ರಶ್ನೆ ಕಾಡಿತ್ತು, ಈ ಪ್ರಶ್ನೆಗೆ ಸ್ವತಃ ಗೌತಮಿ ಅವರೇ ಉತ್ತರ ಕೊಟ್ಟಿದ್ದಾರೆ. ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಭಾಗ್ಯಲಕ್ಷ್ಮಿ ಧಾರವಾಹಿ ಇಂದ ಹೊರಬರುವುದಕ್ಕೆ ಕಾರಣ ಏನು ಎಂದು ತಿಳಿಸಿದ್ದಾರೆ.. ಇದನ್ನು ಓದಿ..ಮತ್ತೊಬ್ಬರು ಬಿಗ್ ಬಾಸ್ ಸ್ಪರ್ದಿಯ ಖಾಸಗಿ ವಿಡಿಯೋ ಬಿಡುಗಡೆಯಾಗಿ ಹೋಯ್ತು; ಶಾಕ್ ಆಗಿ ಶೇಕ್ ಆದ ಚಿತ್ರರಂಗ. ಏನಾಗಿದೆ ಗೊತ್ತೆ?

“ನಮಸ್ತೆ .. ವೈಯಕ್ತಿಕ ಕಾರಣಗಳಿಂದ ಭಾಗ್ಯಲಕ್ಷ್ಮಿ ಇಂದ ಹೊರ ಬರಬೇಕಾಯಿತು…ಇಷ್ಟು ದಿನ ‘ ನೆಗಟಿವ್ ಪಾತ್ರದಲ್ಲೂ ನನ್ನ ಒಪ್ಪಿ ಹರಸಿದ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು..
ತುಂಬಾ ಕಷ್ಟದ ನಿರ್ಧಾರ ಆದರೆ ಅನಿವಾರ್ಯ ಪರಿಸ್ಥಿತಿ, ಆದಷ್ಟು ಬೇಗ ನಿಮಗೆ ಹೇಳುತ್ತೇನೆ…ನಗುನಗುತಾ ಹೊರ ಬಂದಿದ್ದೇನೆ. ಬೇರೆ ಯಾವುದೇ ಕಾರಣ ಇಲ್ಲ.. ಇನ್ನು ಮುಂದೆಯೂ ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ..” ಎಂದು ಬರೆದುಕೊಂಡಿದ್ದಾರೆ ನಟಿ ಗೌತಮಿ. ಇದನ್ನು ನೋಡಿದ ನೆಟ್ಟಿಗರು ಮತ್ತೊಂದು ಶುಭ ಸುದ್ದಿಯ ಜೊತೆಗೆ ಬೇಗ ವಾಪಸ್ ಬನ್ನಿ ಎನ್ನುತ್ತಿದ್ದಾರೆ.

ಗೌತಮಿ ಅವರ ಬಗ್ಗೆ ಹೆಚ್ಚಾಗಿ ಹೇಳುವುದೇ ಬೇಡ, ಗೌತಮಿ ಅವರು ಮೊದಲಿಗೆ ಚಿ.ಸೌ.ಸಾವಿತ್ರಿ ಎನ್ನುವ ಧಾರವಾಹಿಯಲ್ಲಿ ನಟಿಸಿದ್ದರು. ಅದಾದ ಬಳಿಕ ಇನ್ನು ಕೆಲವು ಧಾರವಾಹಿಗಳು ಹಾಗೂ ಸಿನಿಮಾದಲ್ಲಿ ನಟಿಸಿದ್ದರು. ಜೊತೆಗೆ ಬಿಗ್ ಬಾಸ್ ಕನ್ನಡ ಸೀಸನ್ 3ರಲ್ಲಿ ಸ್ಪರ್ಧಿಯಾಗಿ ಸಹ ಬಂದಿದ್ದರು. ಈಗ ಭಾಗ್ಯಲಕ್ಷ್ಮಿ ಧಾರವಾಹಿ ಮೂಲಕ ನೆಗಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಗೌತಮಿ ಅವರು ಈಗ ಧಾರವಾಹಿ ತಂಡಕ್ಕೆ ಗುಡ್ ಬೈ ಹೇಳಿದ್ದು, ಮುಂದೆ ಯಾವ ಪ್ರಾಜೆಕ್ಟ್ ಮೂಲಕ ಕಂಬ್ಯಾಕ್ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..ಮಗು ಬೇಕು ಆದರೆ ಮದುವೆ ಏನು ಬೇಡವಂತೆ; ಮತ್ತೆಗೆ ಮಗು ಸಾಧ್ಯ?? ಖ್ಯಾತ ನಟಿ ಬಹಿರಂಗವಾಗಿನೇ ಹೇಳಿದ್ದೇನು ಗೊತ್ತೇ??

Comments are closed.