Neer Dose Karnataka
Take a fresh look at your lifestyle.

Astrology: ಕೇವಲ ಲಕ್ಷ್ಮಿ ದೇವಿಯನ್ನು ಪೂಜಿಸುವುದು ಅಷ್ಟೇ ಅಲ್ಲ, ಈ ದೇವರ ಜೊತೆ ಲಕ್ಷ್ಮಿ ಯನ್ನು ಪೂಜಿಸಿ, ಹಣ ಹುಡುಕಿಕೊಂಡು ಬಂದು ಶ್ರೀಮಂತರಾಗ್ತಿರಾ, ನಾಲ್ಕು ಜನಕ್ಕೆ ಒಳ್ಳೆಯದು ಮಾಡ್ತೀರಾ.

Astrology: ನಮ್ಮ ಹಿಂದು ಧರ್ಮದಲ್ಲಿ ತಿಳಿಸಿರುವ ಹಾಗೆ ಸಂಪತ್ತಿನ ದೇವರು ಲಕ್ಷ್ಮೀದೇವಿ. ಲಕ್ಷ್ಮೀದೇವಿಯನ್ನು ಕಟ್ಟುನಿಟ್ಟಿನಿಂದ ಶಿಸ್ತಿನಿಂದ ಪೂಜೆ ಮಾಡಿದರೆ, ದೇವಿಯ ಅನುಗ್ರಹ ನಿಮಗೆ ಸಿಗುತ್ತದೆ. ಲಕ್ಷ್ಮೀದೇವಿಯ ಅನುಗ್ರಹ ಸಿಕ್ಕರೆ, ಆ ವ್ಯಕ್ತಿಯ ಜೀವನದಲ್ಲಿ ಇರುವ ಎಲ್ಲಾ ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತದೆ. ಜೀವನದಲ್ಲಿ ಯಾವುದೇ ತೊಂದರೆ ಇಲ್ಲದೆ, ಮುನ್ನಡೆಸಿಕೊಂಡು ಹೋಗಬಹುದು.. ಶರದ್ ಪೂರ್ಣಿಮೆ ಹಾಗೂ ದೀಪಾವಳಿ ದಿನ ಲಕ್ಷ್ಮೀದೇವಿಯ ಪೂಜೆ ಮಾಡಿದರೆ, ನಿಮಗೆ ಐಶ್ವರ್ಯ, ನೆಮ್ಮದಿ ಸಂಪತ್ತು ಎಲ್ಲವೂ ಲಭಿಸುತ್ತದೆ. ಈ ದಿನ ಏನೆಲ್ಲಾ ಮಾಡಬೇಕು ಎಂದು ತಿಳಿಸುತ್ತೇವೆ ನೋಡಿ..

*ಅಶೋಕ ಮರದ ಎಲೆ ತೆಗೆದುಕೊಂಡು ಅದರ ಮೇಲೆ ಅರಿಷಿನದಿಂದ ಅತವಾ ರೋಲಿ ಇಂದ ಶ್ರೀ ಎಂದು ಬರೆಯಿರಿ, ಇದನ್ನು ಕಮಲಗಟ್ಟದ ಕಾಳುಗಳ ಜೊತೆಗೆ ಈ ಎಲೆಯನ್ನು ಇಟ್ಟು ಇದನ್ನು ನಿಮ್ಮ ಮನೆಯ ಬಾಗಿಲಿನ ಹತ್ತಿರ ಇಡಿ. ಹೀಗೆ ಮಾಡುವುದರಿಂದ ಲಕ್ಷ್ಮೀದೇವಿಗೆ ಸಂತೋಷವಾಗಿ ನಿಮ್ಮ ಮನೆಗೆ ಬರುತ್ತಾಳೆ.
*ಲಕ್ಷ್ಮೀದೇವಿಯ ಮೆಚ್ಚಿನ ಬಣ್ಣ ಬಿಳಿ, ದೇವಿಗೆ ನೈವೇದ್ಯ ಅರ್ಪಣೆ ಮಾಡುವಾಗ, ಹಾಲು ಅಥವಾ ಬಿಳಿ ಬಣ್ಣದ ಯಾವುದೇ ತಿಂಡಿಗಳನ್ನು ಅರ್ಪಿಸಿದರೆ, ತಾಯಿಯ ಆಶೀರ್ವಾದ ಸಿಗುತ್ತದೆ.
*ನರಸಿಂಹಸ್ವಾಮಿಗೆ ಪೂಜೆ ಮಾಡುವುದರ ಜೊತೆಗೆ ಲಕ್ಷ್ಮೀದೇವಿಗೂ ಪೂಜೆ ಮಾಡಿ. ಇದರಿಂದ ಅದೃಷ್ಟ ಇಲ್ಲದವರ ಮನೆಗೂ ಲಕ್ಷ್ಮೀದೇವಿ ಬರುತ್ತಾಳೆ. ಇದನ್ನು ಓದಿ..Astrology: ಬೇಕಿದ್ರೆ ಬರೆದು ಇಟ್ಕೊಳಿ: ಇನ್ನು 10 ದಿನ ಮಾತ್ರ ನಿಮಗೆ ಕಷ್ಟ: ಆಮೇಲೆ ನಿಮ್ಮ ಟಚ್ ಮಾಡೋಕೆ ಕೂಡ ಆಗಲ್ಲ. ಯಾವ ರಾಶಿಗಳಿಗೆ ಗೊತ್ತೇ?

*ದಕ್ಷಿಣಾವರ್ತಿ ಶಂಕ ಮನೆಯಲ್ಲಿದ್ದರೆ, ದೀಪಾವಳಿ ದಿನ ಅದರ ಒಳಗೆ ಸ್ವಲ್ಪ ಅಕ್ಕಿ ಹಾಕಿ, ಅದಕ್ಕೆ ಪೂಜೆ ಮಾಡಿ.
*ಒಂದು ಕೆಂಪು ಬಟ್ಟೆಗೆ ಗೋಮತಿ ಚಕ್ರ ಹಾಗೂ 7 ನಾಣ್ಯಗಳನ್ನು ಕಟ್ಟಿ ಶಂಕದ ಜೊತೆಗೆ ಇಡಿ. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮೀದೇವಿಯ ಆಶೀರ್ವಾದ ನಿಮ್ಮ ಜೊತೆಯಲ್ಲಿ ಇರುತ್ತದೆ.
*ಶರದ್ ಪೂರ್ಣಿಮೆಯ ದಿನ ಅಥವಾ ದೀಪಾವಳಿ ದಿನ ಲಕ್ಷ್ಮೀದೇವಿಗೆ ಇಷ್ಟ ಆಗುವಂತಹ, ಚಿನ್ನ ಅಥವಾ ಬೆಳ್ಳಿ ಆಭರಣಗಳಿಂದ ಅರ್ಪಣೆ ಮಾಡಿ. ಜೊತೆಗೆ ಮಾವು ಹಾಗು ಪಂಚಾಮೃತದಿಂದ ಮಾಡಿರುವ ಸಿಹಿ ತಿಂಡಿಗಳನ್ನು ದೇವಿಗೆ ಅರ್ಪಣೆ ಮಾಡಿದರೆ, ಅವಳ ಆಶೀರ್ವಾದ ನಿಮಗೆ ಸಿಗುತ್ತದೆ.

*ಶರದ್ ಪೂರ್ಣಿಮೆಯ ದಿವಸ, ಲಕ್ಷ್ಮೀದೇವಿ, ಕುಬೇರ ಹಾಗೂ ಶ್ರೀಹರಿಯ ಪೂಜೆ ಮಾಡಿ. ನಂತರ ದೇವರಿಗೆ ಪಾಯಸ ನೈವೇದ್ಯಕ್ಕೆ ಇಡಿ. ಚಂದ್ರದೇವರ ದೇವಸ್ಥಾನದಲ್ಲಿ ಈ ಪೂಜೆ ಮಾಡಬೇಕು. ಇದರಿಂದ ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲೆ ಇರುತ್ತದೆ.
*ದೀಪಾವಳಿ ಅಥವಾ ಶರದ್ ಪೂರ್ಣಿಮೆಯ ದಿವಸ ಹಣದ ನೋಟ್ ಗಳಿಗೆ ಕೇಸರಿ ಅಥವಾ ಅರಿಶಿನ ಹಚ್ಚಿ ಅವುಗಳನ್ನು ಪೂಜೆಗೆ ಇಡಿ. ಪೂಜೆ ಮುಗಿದ ನಂತರ, ಆ ದುಡ್ಡನ್ನು ಹಳದಿಯ ಬಟ್ಟೆಯಲ್ಲಿ ಕಟ್ಟಿ, ಕಪಾಟಿನಲ್ಲಿ ಇರಿಸಿ. ಇದರಿಂದ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ. ಇದನ್ನು ಓದಿ..Business Idea: ನೀವು ಹತ್ತನೇ ತರಗತಿ ವರೆಗೂ ಓದಿದ್ದರೂ ಸಾಕು, ನಿಮ್ಮ ಹಳ್ಳಿಯಲ್ಲಿಯೇ ಈ ಉದ್ಯಮ ಆರಂಭಿಸಿ, ಪೇಟೆಯವರಿಗಿಂತ ಹೆಚ್ಚು ದುಡಿಯಿರಿ.

Comments are closed.