Neer Dose Karnataka
Take a fresh look at your lifestyle.

Tomato Rate: ರಾಜ್ಯ ಮಾಡದೆ ಇದ್ದರೇ ಏನು- ಟೊಮೊಟೊ ಬೆಲೆಗೆ ಕಡಿವಾಣ ಹಾಕಲು ಮೋದಿ ಎಂಟ್ರಿ- ಕೇಂದ್ರ ಏನು ಮಾಡುತ್ತಿದೆ ಗೊತ್ತೇ??

Tomato Rate: ಈಗ ನಮ್ಮ ರಾಜ್ಯದಲ್ಲಿ ಟೊಮೊಟೊ ಬೆಲೆ (Tomato Rate) ವಿಪರೀತ ಏರಿಕೆ ಆಗಿರುವ ವಿಷಯ ಗೊತ್ತೇ ಇದೆ. ಇತ್ತೀಚಿನ ದಿನಗಳಲ್ಲಿ ಟೊಮೊಟೊ ಬೆಲೆ (Tomato Rate) ಗರಿಷ್ಠ ಮಟ್ಟದಲ್ಲಿ ದಾಖಲಾಗಿತ್ತು. ಇದರಿಂದ ಜನಸಾಮಾನ್ಯರಿಗೆ ಟೊಮೊಟೊ ಕೊಂಡುಕೊಳ್ಳುವುದು ಕಷ್ಟವಾಗುತ್ತಿದೆ. ಈ ಸಮಯದಲ್ಲಿ ಟೊಮೊಟೊ ಬೆಲೆ (Tomato Rate) ಏರಿಕೆಯ ಬಿಸಿ ಕೇಂದ್ರ ಸರ್ಕಾರವನ್ನು ಸಹ ತಟ್ಟಿದೆ. ಕೇಂದ್ರ ಸರ್ಕಾರವೇ ಈಗ ಟೊಮೊಟೊ ಬೆಲೆ ಇಳಿಕೆ ಮಾಡುವ ಕೆಲಸಕ್ಕೆ ಮುಂದಾಗಿದೆ. ಕರ್ನಾಟಕ (Karnataka), ಆಂಧ್ರಪ್ರದೇಶ (Andhrapradesh) ಮತ್ತು ಮಹಾರಾಷ್ಟ್ರ (Maharashtra) ದಲ್ಲಿ ಟೊಮೊಟೊ ಬೆಲೆ ಏರಿಕೆ ಆಗಿದೆ.

tomato will be distributed with subsidy from central govt
tomato will be distributed with subsidy from central govt

ಹಾಗಾಗಿ ಈ ಮೂರು ರಾಜ್ಯಗಳಿಂದ ಟೊಮೊಟೊ ಖರೀದಿ ಮಾಡಬೇಕು ಎಂದು ಕೇಂದ್ರ ಸರ್ಕಾರವು ಸರ್ಕಾರಿ ಸಂಘಗಳಿಗೆ, ನಾಫೆಡ್ ಗೆ ಮತ್ತು NCCF ಗೆ ನಿರ್ದೇಶನ ನೀಡಿದೆ..ಆದರೆ ಈ ರಾಜ್ಯಗಳಲ್ಲಿ ಕೂಡ ಬೇಕಾದಷ್ಟು ಟೊಮೊಟೊ ಇಲ್ಲ, ಹಾಗಾಗಿ ಟೊಮೊಟೊ ಹೇಗೆ ಕೊಂಡುಕೊಳ್ಳುವುದು ಎನ್ನುವ ಪ್ರಶ್ನೆ ಶುರುವಾಗಿದೆ. ಕೇಂದ್ರ ಸರ್ಕಾರದ ಯೋಜನೆ ಏನು ಎಂದರೆ, ಟೊಮೊಟೊ ಗರಿಷ್ಠ ಬೆಲೆ (Tomato Rate) ದಾಖಲಾಗಿರುವ ಕಡೆ ಈ ರೀತಿಯಲ್ಲಿ ಟೊಮೊಟೊ ವಿತರಣೆ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶ. ಇದನ್ನು ಓದಿ..DK Shivakumar: ದಿಡೀರ್ ಎಂದು ಕೇಂದ್ರದ ವಿರುದ್ಧ ಪ್ರತಿಭಟನೆಗೆ ಡಿಕೆಶಿ ನಿರ್ಧಾರ- ಕಾರಣಗಳ ಸಮೇತ ವಿವರಣೆ.

ನಾಳೆ ಜುಲೈ 14ರಿಂದ ದೆಹಲಿಯ ಎನ್.ಸಿ.ಆರ್ (NCR) ನಲ್ಲಿ ಟೊಮೊಟೊವನ್ನು ಸಣ್ಣ ಚಿಲ್ಲರೆ ಅಂಗಡಿಗಳ ಮೂಲಕ, ಸಬ್ಸಿಡಿ ದರದಲ್ಲಿ ಟೊಮೊಟೊ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಮಾನ್ಸೂನ್ ಇಂದ ದೆಹಲಿ(Delhi) ಹಾಗೂ ಇನ್ನಿತರ ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದೆ, ಇದರಿಂದ ಟೊಮೊಟೋ ಬೆಲೆ ಕೆಜಿಗೆ ₹200 ತಲುಪಿದೆ. ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ (ನಾಫೆಡ್‌) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕ ಒಕ್ಕೂಟ (ಎನ್‌ಸಿಸಿಎಫ್‌) ಟೊಮೊಟೊ ಸಂಗ್ರಹಣೆ ಕೆಲಸದಲ್ಲಿ ತೊಡಗಿದೆ. ಬಳಿಕ ಈ ಟೊಮೊಟೊ ಅನ್ನು ಸರ್ಕಾರ ಸಬ್ಸಿಡಿ ದರಕ್ಕೆ (Tomato Rate) ಮಾರಾಟ ಮಾಡುತ್ತದೆ.

ಕೇಂದ್ರ ಸಚಿವಾಲಯ ತಿಳಿಸಿರುವುದು ಏನು ಎಂದರೆ, ಕಳೆದ ಒಂದು ತಿಂಗಳಲ್ಲಿ ಟೊಮೊಟೊ ಬೆಲೆ ಅತಿಹೆಚ್ಚು ಏರಿಕೆ ಆಗಿರುವ ಪ್ರದೇಶದಲ್ಲಿ ಈ ರೀತಿಯಾಗಿ ಟೊಮೊಟೊ ಬಿಡುಗಡೆ ಮಾಡಬೇಕು ಎಂದುಕೊಂಡಿದೆ..ಆ ಊರುಗಳಲ್ಲಿ ಟೊಮೊಟೋ ಬೆಲೆ (Tomato Rate) ಆವರೇಜ್ ಗಿಂತ ಜಾಸಸ್ತಿ ಇದ್ದರೆ ಈ ರೀತಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಜುಲೈ, ಅಗಸ್ಟ್, ಆಕ್ಟೊಬರ್ ಮತ್ತು ನವೆಂಬರ್ ಈ ತಿಂಗಳುಗಳಲ್ಲಿ ಟೊಮೊಟೊ (Tomato) ಉತ್ಪಾದನೆಗೆ ಕಡಿಮೆ ಇರುವ ಸಮಯ. ಜುಲೈ ನಲ್ಲಿ ಮಳೆ ಇಂದಾಗಿ, ವಿತರಣೆಗೆ ತೊಂದರೆ ಆಗುತ್ತದೆ. ಇದೇ ವೇಳೆ, ಬೆಳೆಗೆ ಕೆಲವು ರೋಗಗಳು ಕೂಡ ಬಂದಿದೆ. ಬಿಸಿಲಿದ್ದ ಕಾರಣ ಉತ್ಪಾದನೆ ಸಹ ಕಡಿಮೆ ಆಗಿದೆ. ಇದನ್ನು ಓದಿ..News: ಮತ್ತೆ ಬಂದಿದೆ ಕೊನೆಯ ಗಡುವು- ಜೂಲೈ 31 ಆಗುವಷ್ಟರಲ್ಲಿ ಈ ಮುಖ್ಯ ಕೆಲಸ ಮುಗಿಸಿ. ಎಲ್ಲವೂ ಹಣಕ್ಕೆ ಸಂಬಂಧಿಸಿದ್ದೇ.

ಮುಂಗಾರು ಮಳೆ ತಡವಾಗಿ ಶುರುವಾಗಿದ್ದು ಪರಿಸ್ಥಿತಿಗೆ ಮುಖ್ಯ ಕಾರಣ ಎಂದರೆ ತಪ್ಪಲ್ಲ. ಈಗ ಗುಜರಾತ್ (Gujarat), ಮಧ್ಯಪ್ರದೇಶ (Madhyapradesh) ಮತ್ತು ಇನ್ನು ಕೆಲವು ರಾಜ್ಯಗಳಿಗೆ ಮಹಾರಾಷ್ಟ್ರ (Maharashtra) ಇಂದ ಟೊಮೊಟೊ ಪೂರೈಕೆ ಆಗುತ್ತಿದೆ. ಆಂಧ್ರಪ್ರದೇಶದ ಮದನಪಲ್ಲಿ ಇಂದಲೂ ಪೂರೈಕೆ ಮಾಡುತ್ತಿದೆ. ದೆಹಲಿಗೆ ಮುಖ್ಯವಾಗಿ ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದಿಂದ ಪೂರೈಕೆ ಆಗುತ್ತಿದೆ (Tomato Rate). ಇದನ್ನು ಓದಿ..Cheap Bikes: ಬೈಕ್ ಖರೀದಿ ಮಾಡುವ ಬಜೆಟ್ ತೊಂದರೆಯೇ? ಹಾಗಿದ್ದರೆ ಕಡಿಮೆ ಬೆಲೆಗೆ ಸಿಗುವ ಈ ಬೈಕ್ ಗಳನ್ನೂ ನೋಡಿ, ಖರೀದಿ ಮಾಡಿ.

Comments are closed.