Neer Dose Karnataka
Take a fresh look at your lifestyle.

ಭಾರತದ ಭವಿಷ್ಯದ ವೇಗಿ ಇವನು, ಈತನನ್ನು ಈಗಳಿಂದಲೇ ಬಿಟ್ಟು ಕೊಡಬೇಡಿ, ಚಾನ್ಸ್ ಕೊಡಿ ಎಂದ ಸುನಿಲ್ ಗವಾಸ್ಕರ್. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ಏಷ್ಯಾಕಪ್ ಸೋಲಿನ ಬಳಿಕ ಭಾರತ ತಂಡವು ಈಗ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ಧದ ಸರಣಿ ಪಂದ್ಯಗಳಿಗೆ ರೆಡಿಯಾಗುತ್ತಿದೆ. ಟಿ20 ವಿಶ್ವಕಪ್ ಶುರು ಆಗುವುದಕ್ಕಿಂತ ಮೊದಲು ಈ ಎರಡು ಸರಣಿಗಳನ್ನು ಭಾರತ ತಂಡ ಆಡಬೇಕು. ಮುಂದಿನ ತಿಂಗಳಿಂದ ಟಿ20 ವಿಶ್ವಕಪ್ ಶುರುವಾಗುತ್ತದೆ. ಪ್ರೆಸ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್ ಅವರು ಈ ಪಂದ್ಯಗಳಿಗೆ ಟೀಮ್ ಇಂಡಿಯಾ ಸ್ಕ್ವಾಡ್ ಇನ್ನು ಆಯ್ಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ..

ತಂಡ ಇನ್ನು ಆಯ್ಕೆ ಆಗುವುದಕ್ಕಿಂತ ಮೊದಲು, ಭಾರತ ತಂಡದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಅವರು ಆ ಒಬ್ಬ ಆಟಗಾರನನ್ನು ಮರಳಿ ಭಾರತ ತಂಡಕ್ಕೆ ಕರೆತರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸುನೀಲ್ ಗವಾಸ್ಕರ್ ಅವರು ಹೇಳಿರುವುದು ದೀಪಕ್ ಚಹರ್ ಅವರ ಬಗ್ಗೆ. ದೀಪಕ್ ಚಹರ್ ಅವರು ಭಾರತದ ಸೌತ್ ಆಫ್ರಿಕಾ ಟೂರ್ನಿ ಸಮಯದಲ್ಲಿ ಇಂಜುರಿಗೆ ಒಳಗಾಗಿ ತಂಡದಿಂದ ಹೊರಗುಳಿದಿದ್ದಾರೆ. ಇವರು ಒಲ್ಲೆ ಆಟಗಾರ ಆಗಿದ್ದು, ಭಾರತ ತಂಡಕ್ಕೆ ಚಹರ್ ಕಂಬ್ಯಾಕ್ ಮಾಡಬೇಕು ಎಂದಿದ್ದಾರೆ ಸುನೀಲ್ ಗವಾಸ್ಕರ್.

ನನ್ನ ಪ್ರಕಾರ ದೀಪಕ್ ಚಹರ್ ಅವರು ತಂಡಕ್ಕೆ ಮರಳಿ ಬರಬೇಕು. ಆಸ್ಟ್ರೇಲಿಯಾ ಗ್ರೌಂಡ್ಸ್ ನಲ್ಲಿ ಎಕ್ಸ್ಟ್ರಾ ಬೌನ್ಸ್ ಇರುವ ಕಾರಣ, ಅಲ್ಲಿನ ಪಿಚ್ ನಲ್ಲಿ ಇವರು ಹೊಸ ಬಾಲ್ ಇಂದ ಒಳ್ಳೆಯ ಪ್ರದರ್ಶನ ಕೊಡುತ್ತಾರೆ ಹಾಗೂ ವಿಕೆಟ್ಸ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಸೌತ್ ಆಫ್ರಿಕಾ ಸರಣಿ ಸಮಯದಲ್ಲಿ 4 ರಿಂದ 5 ಬೌಲರ್ ಗಳನ್ನು ಸುಲೆಕ್ಟ್ ಮಾಡಲಾಗಿತ್ತು, ಅವರಲ್ಲಿ ಯಾರು ಸಹ ವೇಸ್ಟ್ ಆಗುವುದಿಲ್ಲ. ಟಿ20 ರೀತಿಯ ವೇಗದ ಪಂದ್ಯಕ್ಕೆ ದೀಪಕ್ ಚಹರ್ ಉತ್ತಮ ಆಯ್ಕೆ ಎಂದು ನಾನು ಭವಿಸುತ್ತೇನೆ.. ಎಂದು ಹೇಳಿದ್ದಾರೆ ಸುನೀಲ್ ಗವಾಸ್ಕರ್.

Comments are closed.