Neer Dose Karnataka
Take a fresh look at your lifestyle.

Dr Rajkumar: ಅಸಲಿಗೆ ಕಸ್ತೂರಿ ನಿವಾರ ಸಿನಿಮಾದಲ್ಲಿ ಅಣ್ಣಾವ್ರ ಬದಲು ಯಾರು ನಟನೆ ಮಾಡಬೇಕಿತ್ತು ಗೊತ್ತೇ? ತೆರೆ ಹಿಂದೆ ಕೊನೆಗೆ ಅಣ್ಣಾವ್ರಿಗೆ ಅವಕಾಶ ಸಿಕ್ಕಿದ್ದು ಹೇಗೆ ಗೊತ್ತೇ?

Dr Rajkumar: ನಮ್ಮ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಎಂದು ಕರೆಯಲ್ಪಡುವ ಸಿನಿಮಾ ಕಸ್ತೂರಿ ನಿವಾಸ (Kasturi Nivasa). ಡಾ.ರಾಜ್ ಕುಮಾರ್ ಅವರು, ಲೀಲಾವತಿ ಅವರು, ನರಸಿಂಹರಾಜು ಅವರು ಹಾಗೂ ಇನ್ನಿತರರು ನಟಿಸಿ, ಕನ್ನಡದ ಮೇರು ನಿರ್ದೇಶಕರಾದ ದೊರೈ ಭಗವಾನ್ (Dorai Bhagavan) ಜೋಡಿ ನಿರ್ದೇಶನ ಮಾಡಿ, ಕೆ.ಸಿ.ಎನ್ ಗೌಡ (KCN Gowda0 ಅವರು ನಿರ್ಮಾಣ ಮಾಡಿದ್ದ ಈ ಸಿನಿಮಾ ಇಂದಿಗೂ ಎವರ್ ಗ್ರೀನ್ ಅಭಿಮಾನಿಗಳ ಮೆಚ್ಚಿನ ಸಿನಿಮಾ ಆಗಿದ್ದು, ಮೊದಲಿಗೆ ಈ ಸಿನಿಮಾದಲ್ಲಿ ನಟಿಸಬೇಕಾಗಿಫ್ಸ್, ಅಣ್ಣಾವ್ರು ಅಲ್ಲ ಎನ್ನುವ ವಿಚಾರ ಹಲವರಿಗೆ ಗೊತ್ತಿಲ್ಲ..

ಹೌದು, ಕಸ್ತೂರಿ ನಿವಾಸ ಸಿನಿಮಾದ ಚಿತ್ರಕಥೆ ಬರೆದವರು ತಮಿಳು ಬರಹಗಾರ, ಜಿ. ಬಾಲಸುಬ್ರಹ್ಮಣ್ಯಂ ಅವರು. ಸಿನಿಮಾ ನಿರ್ಮಾಪಕರು ಮೊದಲಿಗೆ ತಮಿಳಿನ ಖ್ಯಾತ ನಟ ಶಿವಾಜಿ ಗಣೇಶನ ಅವರು ಸಿನಿಮಾದಲ್ಲಿ ನಟಿಸಬೇಕು ಎಂದು ಅವರನ್ನು ಸಂಪರ್ಕಿಸಿದ್ದರಂತೆ, ಆದರೆ ಶಿವಾಜಿ ಗಣೇಶನ್ (Sivaji Ganesan) ಅವರು ಸಿನಿಮಾದಲ್ಲಿ ಸ್ಯಾಡ್ ಕ್ಲೈಮ್ಯಾಕ್ಸ್ ಇರುವುದರಿಂದ ರಿಜೆಕ್ಟ್ ಮಾಡಿದ್ದರಂತೆ. ನಂತರ ದೊರೈರಾಜ್ ಅವರು ಚಿ.ಉದಯಶಂಕರ್ (Chi Udayashankar) ಅವರನ್ನು ಕನ್ನಡಕ್ಕೆ ಕಥೆ ಮಾಡಲು ಕರೆತಂದರಂತೆ. ಇದನ್ನು ಓದಿ..Prabhas: ಪ್ರಭಾಸ್ ಮದುವೆಗೆ ಕಂಟಕ ವಾಗಿರುವ ಇಬ್ಬರು ಹೆರೋಯಿನ್ ಗಳು ಯಾರು ಗೊತ್ತೇ?? ಇವರಿಂದನೇ ಅಂತೇ ಮದುವೆಯಾಗುತಿಲ್ಲ.

ಹಾಗೆಯೇ ಕೆ.ಸಿ.ಎನ್ ಗೌಡ ಅವರು ಸಿನಿಮಾ ಮೂಲ ನಿರ್ಮಾಪಕರಿಂದ ₹38,000 ಸಾವಿರ ರೂಪಾಯಿ ಕೊಟ್ಟು ಕಥೆ ಪಡೆದು, ಕನ್ನಡಕ್ಕೆ ಕಥೆಯನ್ನು ತಂದು ಡಾ.ರಾಜ್ ಕುಮಾರ್ ಅವರನ್ನು ಅಪ್ರೋಚ್ ಮಾಡಿದಾಗ, ಅಣ್ಣಾವ್ರಿಗೆ ಕೂಡ ಹಿಂಜರಿಕೆ ಇತ್ತಂತೆ. ಆದರೆ ನಿರ್ಮಾಪಕರಿಗೆ ಇಸ ಆತ್ಮವಿಶ್ವಾಸ ನೋಡಿ ಅಣ್ಣಾವ್ರು ಸಿನಿಮಾ ಒಪ್ಪಿದರಂತೆ. ಒಳ್ಳೆಯ ತಾರಾಬಳಗ ಅದ್ಭುತವಾದ ಕಥೆ ಹೊಂದಿದ್ದ ಕಸ್ತೂರಿ ನಿವಾಸ ಸಿನಿಮಾ, 1971ರ ಜನವರಿ 29ರಂದು ಬಿಡುಗಡೆ ಆಗಿತ್ತು.

ಆರಂಭದ ದಿನಗಳಲ್ಲಿ ಕಸ್ತೂರಿ ನಿವಾಸ ಯಶಸ್ಸು ಮತ್ತು ಕಲೆಕ್ಷನ್ ಎರಡರಲ್ಲೂ ಸ್ವಲ್ಪ ಸ್ಲೋ ಆಗಿಗೆ ಇತ್ತಂತೆ. ಆದರೆ ಒಬ್ಬರು ವಿಮರ್ಶಕರು ಸಿನಿಮಾ ಬಗ್ಗೆ ಉತ್ತಮವಾದ ರಿವ್ಯೂ ಬರೆದ ನಂತರ ಕಸ್ತೂರಿ ನಿವಾಸ ಸಿನಿಮಾ ಅದ್ಭುತವಾಗಿ ಪ್ರದರ್ಶನ ನೀಡುವುದಕ್ಕೆ ಶುರು ಮಾಡಿತು ಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಅದ್ಭುತ ಪ್ರದರ್ಶನದಿಂದ ಈ ಸಿನಿಮಾ, 16ಥಿಯೇಟರ್ ಗಳಲ್ಲಿ ಶತದಿನೋತ್ಸವ ಆಚರಿಸಿ, ಇಂದಿಗು ಆಲ್ ಟೈಮ್ ಇಂಡಸ್ಟ್ರಿ ಹಿಟ್ ಎನ್ನಿಸಿಕೊಂಡಿದೆ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??

Comments are closed.