Neer Dose Karnataka
Take a fresh look at your lifestyle.

Astrology: ಲಕ್ಷ್ಮಿ ದೇವಿ ಮನೆಯಲ್ಲಿ ಶಾಶ್ವತವಾಗಿ ನೆಲೆಸಬೇಕು ಎಂದರೆ, ನೀವೇನು ಮಾಡಬೇಕು ಗೊತ್ತೇ?? ಇದೊಂದು ಚಿಕ್ಕ ಕೆಲಸ ಸಾಕು.

Astrology: ಎಲ್ಲರಿಗೂ ಐಷಾರಾಮಿ ಜೀವನ, ಯಾವುದೇ ತೊಂದರೆ ಇಲ್ಲದ ಸುಖದ ಜೀವನ ನಡೆಸಬೇಕು ಎಂದು ಆಸೆ ಇರುತ್ತದೆ. ಅದೆಲ್ಲ ನಡೆಸಲು ಬೇಕಿರುವುದು ಹಣ, ಹಣ ನಮ್ಮ ಜೊತೆಗಿರಬೇಕು ಎಂದರೆ ಸಂಪತ್ತಿನ ದೇವತೆ ಲಕ್ಷ್ಮೀದೇವಿಯ ಆಶೀರ್ವಾದ ನಮ್ಮ ಜೊತೆಗಿರಬೇಕು. ಲಕ್ಷ್ಮೀದೇವಿಯನ್ನು ಒಲಿಸಿಕೊಂಡು, ಆಶೀರ್ವಾದ ಪಡೆಯಲು ಹಲವು ಪೂಜೆ, ಪರಿಹಾರಗಳಿವೆ. ನಮ್ಮ ಶಾಸ್ತ್ರದಲ್ಲಿ ಕೂಡ ಅವುಗಳನ್ನು ತಿಳಿಸಲಾಗಿದೆ. ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಲು ಒಂದು ಪರಿಹಾರವನ್ನು ಇಂದು ನಿಮಗೆ ತಿಳಿಸುತ್ತೇವೆ ನೋಡಿ…

ಲಕ್ಷ್ಮೀದೇವಿಯ ಆಶೀರ್ವಾದಕ್ಕೆ ಒಂದು ಪರಿಹಾರ ಮಡಿಕೆ. ನೀವು ಬೇಗ ಶ್ರೀಮಂತರಾಗಬೇಕು ಎಂದು ಬಯಸಿದರೆ, ಒಂದು ಮಣ್ಣಿನ ಮಡಿಕೆ ತೆಗೆದುಕೊಂಡು ಅದಕ್ಕೆ 5 ರೂಪಾಯಿ ಕಾಯ್ನ್ ಗಳನ್ನು ಹಾಕಿ, ನಂತರ ಅಕ್ಕಿ, ಬಾರ್ಲಿ ಅಥವಾ ಗೋಧಿ ಇಂದ ಮಡಿಕೆಯನ್ನು ತುಂಬಿಸಿ. ಬಳಿಕ ಇದನ್ನು ಕಲಶದ ರೀತಿ ಕೆಂಪು ಬಟ್ಟೆಯಿಂದ ಕಟ್ಟಿ, ಲಕ್ಷ್ಮೀದೇವಿಯ ವಿಗ್ರಹ ಅಥವಾ ಫೋಟೋ ಹತ್ತಿರ ಇತ್ತು ಪೂಜಿಸಿ. ಹಗಲು ರಾತ್ರಿ ಎರಡು ಸಮಯ ಈ ಕಲಶವನ್ನು ಇಟ್ಟು, ಮರುದಿನ ಮತ್ತೆ ಕಲಶಕ್ಕೆ ಪೂಜೆ ಮಾಡಿ, ಬಳಿಕ ಕಲಶವನ್ನು ಹಣ ಇಡುವ ಜಾಗದಲ್ಲಿ ಇಡಿ. ಇದನ್ನು ಓದಿ..Horoscope: ಅನುಮಾನ ಪಟ್ರೆ ಕೆಲಸ ಆಗಲ್ಲ, ಬೇಕಿದ್ರೆ ಬರೆದು ಇಟ್ಕೊಳಿ- ಇನ್ನು ಮೂರು ದಿನ ಮಾತ್ರ ಇವರಿಗೆ ಕಷ್ಟ- ಆಮೇಲೆ ಲಕ್ಷ್ಮಿ ದೇವಿ ಹುಡುಕಿಕೊಂಡು ಬರುತ್ತಾಳೆ, ಯಾವ ರಾಶಿಗಳಿಗೆ ಗೊತ್ತೆ?

ಇದೊಂದೇ ಅಲ್ಲದೆ, ಒಂದು ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ, ಅದನ್ನು ಲಕ್ಷ್ಮೀದೇವಿಯ ವಿಗ್ರಹದ ಹತ್ತಿರ ಇಟ್ಟು ಪೂಜೆ ಮಾಡಿ, ನಂತರ ತೆಂಗಿನಕಾಯನ್ನು ನೀವು ಹಣ ಇಡುವ ಜಾಗದಲ್ಲಿ ಇಟ್ಟು ಪೂಜೆ ಮಾಡಿ, ಇದರಿಂದ ನಿಮಗೆ ಹಣದ ವಿಚಾರದಲ್ಲಿ ಯಾವುದೇ ಕೊರತೆ ಆಗುವುದಿಲ್ಲ. ಒಂದು ವೇಳೆ ನಿಮಗೆ ಆಗಾಗ ಹಣದ ವಿಚಾರದಲ್ಲಿ ನಷ್ಟ ಆಗುತ್ತಿದ್ದರೆ, ಶುಕ್ರವಾರದ ದಿನ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಪೂಜೆ ಮಾಡಿಸಿ, ಪೂಜೆ ಮಾಡಿಸುವಾಗ ಹಳದಿ ಅಕ್ಕಿ ಮತ್ತು ಕೆಂಪು ಗುಲಾಬಿಗಳನ್ನು ಇಟ್ಟು ಪೂಜೆ ಮಾಡಿ.

ನಿಮ್ಮ ಮನೆಗೆ ಲಕ್ಷ್ಮೀದೇವಿಗೆ ಆಹ್ವಾನ ನೀಡಿ, ನಿಮ್ಮ ಮನೆಯಲ್ಲೇ ಇರಿ ಎಂದು ಪ್ರಾರ್ಥನೆ ಮಾಡಿ. ನೆನಪಿಡಬೇಕಾದ ವಿಚಾರ ಏನೆಂದರೆ, ದುರಾಸೆ ಇರುವ ವ್ಯಕ್ತಿಗಳಿಗೆ ಲಕ್ಷ್ಮೀದೇವಿಯ ಆಶೀರ್ವಾದ ಸಿಗುವುದಿಲ್ಲ. ದುರಾಸೆ ಎನ್ನುವುದು ಸ್ವಾರ್ಥಕ್ಕೆ ಎಡೆಮಾಡಿಕೊಡುತ್ತದೆ. ತಪ್ಪು ಕೆಲಸ ಮಾಡಲು ಪ್ರೇರೇಪಿಸುತ್ತದೆ. ಹಾಗೆಯೇ ಲಕ್ಷ್ಮೀದೇವಿಗೆ ಕೋಪ ಮಾಡಿಕೊಳ್ಳುವ ಜನರನ್ನು ಕಂಡರೆ ಆಗುವುದಿಲ್ಲ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಕೂಡ ಇದರ ಬಗ್ಗೆ ಹೇಳಿದ್ದು, ಒಬ್ಬ ವ್ಯಕ್ತಿಯ ದೊಡ್ಡ ಶತ್ರು ಕೋಪ ಎಂದು ಹೇಳುತ್ತಾನೆ. ಕೋಪ ಬಂದಾಗ, ಒಳ್ಳೆಯದು ಮತ್ತು ಕೆಟ್ಟದರ ನಡುವಿನ ವ್ಯತ್ಯಾಸವೇ ಮರೆತು ಹೋಗುತ್ತದೆ. ಇದನ್ನು ಓದಿ..Horoscope: ಶುರುವಾಗುತ್ತಿದೆ ಮಹಾ ಸಂಕ್ರಮಣ- ಇದರಿಂದ ಈ ರಾಶಿಗಳಿಗೆ ಅದೃಷ್ಟದ ಸುರಿ ಮಳೆ. ಯಾವ ರಾಶಿಗಳಿಗೆ ಗೊತ್ತೇ?? ಇನ್ನು ಮುಂದಿದೆ ಹಬ್ಬ

Comments are closed.