Neer Dose Karnataka
Take a fresh look at your lifestyle.

Gramayana: ಡಿಕೆ ಶಿವಕುಮಾರ್ ಬೆಂಬಲಕ್ಕೆ ನಿಂತಿರುವ ವಿಜಯ್ ರಾಜ್ ಕುಮಾರ್ ಸಿನೆಮಾಗೆ ನಿರ್ಮಾಪಕರು ಯಾರು ಗೊತ್ತೇ?? ಇವೆಲ್ಲ ಬೇಕಿತ್ತಾ??

Gramayana: ದೊಡ್ಮನೆಯ ಮೂರನೇ ತಲೆಮಾರಿನ ಮಗ ವಿನಯ್ ರಾಜ್ ಕುಮಾರ್ (Vinay Rajkumar) ಅವರ ಸಿನಿಮಾ ಗ್ರಾಮಾಯಣ 2018ರಲ್ಲಿ ಶುರುವಾಗಿ, 25 ದಿನಗಳ ಚಿತ್ರೀಕರಣ ನಡೆದಿತ್ತು. ಆದರೆ ಕೋವಿಡ್ ಸಮಸ್ಯೆ ಎದುರಾಗಿ, ಸಿನಿಮಾ ನಿರ್ಮಾಪಕರು ವಿಧಿವಶರಾದ ನಂತರ ಈ ಸಿನಿಮಾದ ಎಲ್ಲಾ ಕೆಲಸಗಳು ಕೂಡ ನಿಂತು ಹೋಗಿದ್ದವು. ಆದರೆ ಈಗ ಹೊಸ ನಿರ್ಮಾಪಕರ ಎಂಟ್ರಿ ಆಗಿದ್ದು, ಸಿನಿಮಾ ಮತ್ತೆ ಸೆಟ್ಟೇರಲಿದೆ. ಜೂನ್ 8ರಂದು ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಹೊಸದಾಗಿ ಮುಹೂರ್ತ ನಡೆಯಲಿದ್ದು, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ವಿಶೇಷ ಅತಿಥಿಯಾಗಿ ಬರುತ್ತಿದ್ದಾರೆ..

ಗ್ರಾಮಾಯಣ (Gramayana) ಸಿನಿಮಾದ ಈ ಹಿಂದಿನ ಕಥೆ ಈ ಹಿಂದೆ ಚಿತ್ರೀಕರಣ ಮಾಡಿರುವ ದೃಶ್ಯಗಳು ಇದೆಲ್ಲವನ್ನು ಬಿಟ್ಟು, ಅದೇ ಟೈಟಲ್ ಗೆ ಹೊಸ ಕಥೆ ಮಾಡಿಕೊಂಡು ಸಿನಿಮಾ ಶುರು ಮಾಡಲಾಗುತ್ತಿದೆ. ಈ ಹಿಂದೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿರುವ ದೇವನೂರು ಚಂದ್ರು ಅವರು ಗ್ರಾಮಾಯಣ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈ ಸಿನಿಮಾವನ್ನು ಹೊಸದಾಗಿ ನಿರ್ಮಾಣ ಮಾಡುತ್ತಿರುವವರು ಕೆಪಿ ಶ್ರೀಕಾಂತ್ (KP Shreekanth0 ಹಾಗೂ ಲಹರಿ ಸಂಸ್ಥೆಯ ಮನೋಹರ್ ನಾಯ್ಡು (Manohar Naidu) ಅವರು. ಇದನ್ನು ಓದಿ..Sumalatha: ಸೊಸೆಗೆ ಭರ್ಜರಿ ಉಡುಗೊರೆ ಕೊಟ್ಟ ಸುಮಲತಾ- ಅವೀವಾ ಗೆ ಕೊಟ್ಟ ವಜ್ರದ ಆಭರಣಗಳ ಬೆಲೆ ಎಷ್ಟು ಗೊತ್ತೇ?? ದೇವ್ರೇ ಇಷ್ಟೊಂದ??

ಇವರಿಬ್ಬರು ಕೂಡ ಈಗಾಗಲೇ ಉಪೇಂದ್ರ ಅವರ ಯುಐ ಸಿನಿಮಾ ನಿರ್ಮಾಣ ಮಾಡಿದ್ದು, ಅದರ ಜೊತೆಗೆ ವಿನಯ್ ರಾಜ್ ಕುಮಾರ್ ಅವರ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಜೂನ್ 8ರಂದು ಅಂದರೆ ನಾಳೆ ನಡೆಯಲಿರುವ ಮುಹೂರ್ತಕ್ಕೇ ಡಿಸಿಎಂ ಡಿಕೆ ಶಿವಕುಮಾರ್, ಶಿವಣ್ಣ (Shivanna), ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar), ರಾಘಣ್ಣ (Raghanna), ದುನಿಯಾ ವಿಜಯ್ (Duniya Dhananjay), ಡಾಲಿ ಧನಂಜಯ್ (Daali Dhananjay) ಸೇರಿದಂತೆ ಚಂದನವನದ ಕಲಾವಿದರು ಬರುತ್ತಿದ್ದಾರೆ..

ಡಿಕೆಶಿ ಅವರಿಗೆ ಚಿತ್ರರಂಗದ ಬಾಂಧವ್ಯವಿದೆ, ಅಣ್ಣಾವ್ರ ಕುಟುಂಬದ ಜೊತೆಗೆ ಆತ್ಮೀಯವಾಗಿದ್ದಾರೆ. ಹಾಗೆಯೇ ನಿರ್ಮಾಪಕ ಕೆ ಪಿ ಶ್ರೀಕಾಂತ್ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರು ಈಗಾಗಲೇ ಚಂದನವನದಲ್ಲಿ ಹಲವು ಸಿನಿಮಾಗಳನ್ನು ಪ್ರೊಡ್ಯುಸ್ ಮಾಡಿದ್ದಾರೆ. ಕೆಪಿ ಶ್ರೀಕಾಂತ್ ಕನಕಪುರದವರು, ಡಿಕೆ ಶಿವಕುಮಾರ್ ಅವರು ಕೂಡ ಕನಕಪುರದವರು, ಇಬ್ಬರು ಒಂದೇ ಊರಿನವರಾಗಿರುವುದರಿಂದ ಇಬ್ಬರಿಗೆ ಒಳ್ಳೆಯ ಪರಿಚಯವಿದೆ, ಹಾಗಾಗಿ ಡಿಕೆಶಿ ಅವರು ಗ್ರಾಮಾಯಣ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಇದನ್ನು ಓದಿ..Nikhil Kumaraswamy: ದೇಶವೇ ತಿರುಗಿನೋಡಿದ ಅಭಿಷೇಕ್ ಮದುವೆಗೆ, ನಿಖಿಲ್ ಯಾಕೆ ಹೋಗಿಲ್ಲ ಗೊತ್ತೇ?? ಅದೊಂದು ವಿಚಾರಣೆ ಕಾರಣನಾ?

Comments are closed.