Central Government Scheme: ಸುಲಭವಾಗಿ ಕೇಂದ್ರ ಸರ್ಕಾರದಿಂದ ಒಂದು ಲಕ್ಷ ರೂಪಾಯಿ ಸಾಲ. ಪಡೆಯಲು ಅರ್ಜಿ ಹಾಕುವುದು ಹೇಗೆ ಗೊತ್ತೇ? ಸಂಪೂರ್ಣ ಡೀಟೇಲ್ಸ್.
Central Government Scheme- ನಮಸ್ಕಾರ ಸ್ನೇಹಿತರೇ ಪ್ರತಿ ಬಾರಿ ಕೂಡ ನಮ್ಮ ದೇಶದಲ್ಲಿ ಆಗಾಗ ಕೆಲವೊಂದು ವರ್ಗದ ಜನರಿಗೆ ಕೆಲವೊಂದು ವಿಶೇಷ ಯೋಜನೆಗಳನ್ನು ಜಾರಿಗೆ ತರುವಂತಹ ಕೆಲಸಗಳು ನಡೆಯುತ್ತಲೇ ಇರುತ್ತವೆ. ಇವತ್ತಿನ ಲೇಖನಿಯಯಲ್ಲಿ ನಾವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ(PM Vishwakarma Scheme) ಬಗ್ಗೆ ನಿಮಗೆ ವಿವರಣೆಯನ್ನು ನೀಡಲು ಹೊರಟಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ನೀಡುತ್ತೇವೆ.
Central Government Scheme – Vishwakarma yojana explained in Kannada- ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ 2023
ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾಗಿರುವ ಪ್ರಧಾನಿ ನರೇಂದ್ರ ಮೋದಿಯವರು(Prime Minister Narendra Modi) ಇದೇ ಸ್ವಾತಂತ್ರ್ಯ ದಿನದಂದು ವಿಶ್ವಕರ್ಮ ಯೋಜನೆಗೆ ಅನುಮೋದನೆ ನೀಡಿದ್ದರು. ಈ ಯೋಜನೆ ಅನುಸಾರವಾಗಿ ವಿಶ್ವಕರ್ಮ ಜನಾಂಗದ ಕುಶಲಕರ್ಮಿಗಳಿಗೆ 13000 ಕೋಟಿ ರೂಪಾಯಿ ನೆರವನ್ನು ನೀಡುವಂತಹ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಅವರ ಕೌಶಲ್ಯತೆಗೆ ಯಾವುದೇ ಅಡ್ಡಿ ಬರಬಾರದು ಎನ್ನುವ ಕಾರಣಕ್ಕಾಗಿ ಎರಡು ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ ಸಾಲಗಳನ್ನು(Subsidy Loan) ಕೂಡ ನೀಡುವಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಇವತ್ತಿನ ಮಹಾ ಸುದ್ದಿಗಳು- ಇವುಗಳನ್ನು ಓದಿ. ಈ ತಿಂಗಳು ಪೂರ್ತಿ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಅದೃಷ್ಟ ಹುಡುಕಿಕೊಂಡು ಬರುತ್ತೆ. September Horoscope
Vehicle Subsidy Scheme- ತಗೋಳಿ ಇನ್ನೊಂದು ಗ್ಯಾರಂಟಿ- ಈ ಬಾರಿ ವಾಹನ ಖರೀದಿಗೆ ಮೂರು ಲಕ್ಷ. ಮನೆಯಲ್ಲಿಯೇ ಕೂತು ಪಡೆಯಿರಿ.-> Vehicle Subsidy Scheme
Shakti Scheme Smart Card- ಉಚಿತ ಪ್ರಯಾಣಕ್ಕೆ ಬೇಕಾಗಿರುವ ಶಕ್ತಿ ಕಾರ್ಡ್ ನ ಹೊಸ ಅಪ್ಡೇಟ್- ಅತಿ ಸುಲಭವಾಗಿ ಮನೆಯಲ್ಲಿಯೇ ಪಡೆಯಿರಿ ಶಕ್ತಿ ಕಾರ್ಡ್.
Free Laptop Scheme: ಉಚಿತ ಗ್ಯಾರಂಟಿಗಳ ನಡುವೆ- ಉಚಿತ ಲ್ಯಾಪ್ಟಾಪ್ ಯೋಜನೆ. ಮನೆಯಲ್ಲಿ ಓದುವ ಮಕ್ಕಳಿದ್ದರೇ ಉಚಿತ ಲ್ಯಾಪ್ಟಾಪ್ ಪಡೆಯಿರಿ.
Central Government Scheme – Vishwakarma yojana Eligibility- ವಿಶ್ವಕರ್ಮ ಯೋಜನೆಯ ಅರ್ಹತೆ
ಸೆಪ್ಟೆಂಬರ್ 17 2023 ರಿಂದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಆರಂಭವಾಗಿದೆ. ಯಾರೆಲ್ಲ ಈ ಯೋಜನೆಗಳಿಗೆ ಫಲಾನುಭವಿಗಳಾಗಬಹುದು ಅಥವಾ ಅರ್ಹರು ಎನ್ನುವುದನ್ನು ನೋಡುವುದಾದರೆ SC/ST, OBC, ತೃತೀಯ ಲಿಂಗಿಗಳು ಅಥವಾ ದುರ್ಬಲ ವರ್ಗದ ವ್ಯಕ್ತಿಗಳು ಕೂಡ ಇದಕ್ಕೆ ಅರ್ಹರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ವಿಶ್ವಕರ್ಮ ಯೋಜನೆ ಅಡಿಯಲ್ಲಿ 13 ರಿಂದ 15 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿರಿಸಲಾಗಿದೆ ಎಂಬುದನ್ನು ಕೂಡ ನಿರ್ಧರಿಸಲಾಗಿದೆ.
ಭಗವಾನ್ ವಿಶ್ವಕರ್ಮರ ಹೆಸರಿನಲ್ಲಿ ಈ ಯೋಜನೆಯನ್ನು ಈಗಾಗಲೇ ಆರಂಭಿಸಲಾಗಿದ್ದು, ಸಣ್ಣ ವ್ಯಾಪಾರಿಗಳಿಗೆ, ಕರಕುಶಲ ಕಾರ್ಮಿಗಳಿಗೆ ಆರ್ಥಿಕ ಸಹಾಯವನ್ನು ನೀಡುವ ಹಿನ್ನೆಲೆಯಲ್ಲಿ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಹೀಗಾಗಿ ಈ ಯೋಜನೆಯ ಮೂಲಕ ಈ ಮೇಲೆ ಹೇಳಿರುವಂತಹ ಅರ್ಹ ಜನರು ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
Central Government Scheme – When Vishwakarma yojana Will start? -ವಿಶ್ವಕರ್ಮ ಯೋಜನೆಯ ಯಾವಾಗ ಆರಂಭವಾಗುತ್ತದೆ
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಸೆಪ್ಟೆಂಬರ್ 17 ರಿಂದ ಭಗವಾನ್ ವಿಶ್ವಕರ್ಮರ ಜನ್ಮ ವಾರ್ಷಿಕೋತ್ಸವದಂದು ಆನ್ಲೈನ್ ಮೂಲಕ ಪ್ರಾರಂಭಿಸಲಾಗುವುದು ಎಂಬುದಾಗಿ ತಿಳಿದುಬಂದಿದೆ. ಒಮ್ಮೆ ಇದು ಪ್ರಾರಂಭವಾದ ನಂತರ ಇದರ ಲಾಭವನ್ನು ಪಡೆದುಕೊಳ್ಳಬಹುದಾದಂತಹ ಅವಕಾಶವನ್ನು ಸರ್ಕಾರ ಮಾಡಿಕೊಳ್ಳಲಿದೆ ಎಂಬುದನ್ನು ಕೂಡ ಸ್ಪಷ್ಟಪಡಿಸಿದ್ದು, ಒಂದು ವೇಳೆ ನೀವು ಕೂಡ ಈ ಅರ್ಹ ವ್ಯಕ್ತಿಗಳ ಸಾಲಿನಲ್ಲಿ ಕಾಣಿಸಿಕೊಂಡಲ್ಲಿ ನೀವು ಕೂಡ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕೂಡ ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.
Comments are closed.