Neer Dose Karnataka
Take a fresh look at your lifestyle.

Kannada News: ಬಿಜೆಪಿ ಪಕ್ಷ ಹೀನಾಯವಾಗಿ ಸೋತ ಮೇಲೆ ಷಾಕಿಂಗ್ ಹೇಳಿಕೆ ಕೊಟ್ಟ ಪವನ್ ಒಡೆಯರ್: ಮಾಮ ಗೆ ದುರಹಂಕಾರ ಎಂದು ನೇರವಾಗಿ ಹೇಳಿದ್ದೇನು ಗೊತ್ತೇ??

Kannada News: ಕರ್ನಾಟಕ ರಾಜ್ಯದ ವಿಧಾನ ಸಭಾ ಚುನಾವಣೆಯ ಫಲಿತಾಂಶ ಒಂದು ರೀತಿ ಎಲ್ಲರಿಗೂ ಅಚ್ಚರಿ ನೀಡಿದೆ ಎಂದರೆ ತಪ್ಪಲ್ಲ. ಬಿಜೆಪಿ (BJP), ಜೆಡಿಎಸ್ (JDS) ಮತ್ತು ಕಾಂಗ್ರೆಸ್ (Congress) ಪಕ್ಷಗಳು ಜನರ ಮನವೊಲಿಸಲು ಬಹಳಷ್ಟು ಕಸರತ್ತು ಮಾಡಿತ್ತು. ಮೇ 10ರಂದು ಚುನಾವಣೆ ನಡೆದು, ನಿನ್ನೆಯಷ್ಟೇ ಫಲಿತಾಂಶ ಹೊರಬಂದಿದೆ. ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಗೆದ್ದಿದೆ. ಕರ್ನಾಟಕದಲ್ಲಿ ಬಿಜೆಪಿ ಆಡಳಿತ ಕೊನೆಯಾಗಿದೆ.

ಎಲೆಕ್ಷನ್ ಗೆ ಕನ್ನಡಿಗರು ಕೊಟ್ಟಿರುವ ಈ ತೀರ್ಪು ಕೆಲವರಿಗೆ ಇಷ್ಟವಾಗಿದ್ದರೆ, ಇನ್ನು ಕೆಲವರಿಗೆ ಇಷ್ಟವಾಗಿಲ್ಲ. ಈ ವೇಳೆ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ಕೊಡಲಿದ್ದಾರೆ. ಶೀಘ್ರದಲ್ಲೇ ಹೊಸ ಸರ್ಕಾರ ರಚನೆಯಾಗಲಿದೆ. ಈ ವೇಳೆ ಕನ್ನಡ ಚಿತ್ರರಂಗದ ನಿರ್ದೇಶಕ ಪವನ್ ಒಡೆಯರ್ (Pawan Odeyar) ಅವರು ಬಸವರಾಜ್ ಬೊಮ್ಮಾಯಿ (Basavaraj Bommai) ಅವರ ವ್ಯಕ್ತಿತ್ವದ ಬಗ್ಗೆ ಮಾಡಿರುವ ಟ್ವೀಟ್ ಈಗ ವೈರಲ್ ಆಗುತ್ತಿದೆ.. ಇದನ್ನು ಓದಿ..Nagma Life Story: ಹಣದ ಆಸೆಗಾಗಿ ಮದುವೆಯಾಗದೆ ಉಳಿದಿರುವ ಖ್ಯಾತ ನಟಿ ನಗ್ಮಾ ರವರಿಗೆ ಅಪ್ಪ ಅಮ್ಮ ಇಂಜೆಕ್ಷನ್ ಕೊಟ್ಟಿದ್ದು ಯಾಕೆ ಗೊತ್ತೇ?

“ಕರ್ನಾಟಕದ ಪ್ರಾಚೀನ ಜಾನಪದ ಕಲೆ ಡೊಳ್ಳುಕುಣಿತದ ಕುರಿತು ನಿರ್ಮಿಸಿದ್ದ “ಡೊಳ್ಳು” (Dollu) ಚಿತ್ರಕ್ಕೆ ರಾಷ್ಟೀಯ ಪ್ರಶಸ್ತಿ ಬಂದಾಗ,ಬೊಮ್ಮಾಯಿ ಮಾಮಗೆ ಚಿತ್ರ ವೀಕ್ಷಿಸಲು ಕೊರಿದ್ದೆವು.ಮಾಮ ತೋರಿದ ದುರಹಂಕಾರ ನನ್ನ ಕಣ್ಣಿನಲ್ಲಿ ಇನ್ನೂ ಹಾಗೆ ಇದೆ.ತೆಲುಗು ಚಿತ್ರದ ಕಾರ್ಯಕ್ರಮಕ್ಕೆ ಮಾಮ 3 ತಾಸು ಕುಳಿತು ಕೊಳ್ಳುವಷ್ಟು ಸಮಯ ಇದೆ.ಕನ್ನಡಿಗರು ಮುಟ್ಟಾಳರಲ್ಲ. ಸಿದ್ದರಾಮಯ್ಯ (Siddaramaiah) ಸರ್ ಗೆ ಒಂದೇಒಂದು ಬಾರಿ ಕರೆ ಮಾಡಿದ್ದೆವು.

“ಹೌದಾ, ಡೊಳ್ಳು ಕುಣಿತ ನಂಗೆ ಭಾರಿ ಇಷ್ಟ ರೀ” ಎಂದು ಕರೆಕೊಟ್ಟ ಸಂಜೆಯೇ ಬಂದು ಚಿತ್ರ ವೀಕ್ಷಿಸಿ, ಹಾರೈಸಿ, ಹಲವಾರುಕಡೆ ಹೆಮ್ಮೆ ಇಂದ ಮಾತನಾಡಿದ್ದರು. ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ, ಜಾನಪದ ಕಲೆ. ಇವೆಲ್ಲವನ್ನೂ ಜನ ಮಾರಿಕೊಳ್ಳಲ್ಲ..” ಎಂದು ಪವನ್ ಒಡೆಯರ್ ಅವರು ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್ ವೈರಲ್ ಆಗುತ್ತಿದೆ.. ಇದನ್ನು ಓದಿ..Post Office: ಪ್ರತಿ ತಿಂಗಳು ಆದಾಯ ಪಡೆಯಬೇಕು ಎಂದರೇ, ಪೋಸ್ಟ್ ಆಫೀಸ್ ನಲ್ಲಿ ಇದಕ್ಕಿಂತ ಉತ್ತಮ ಯೋಜನೆ ಬೇರೆ ಇಲ್ಲ. ಏನು ಮಾಡಬೇಕು ಗೊತ್ತೇ??

Comments are closed.