Neer Dose Karnataka
Take a fresh look at your lifestyle.

Virat Kohli: ಎಲ್ಲವೂ ಚೆನ್ನಾಗಿತ್ತು, ಆದರೆ ಕೊಹ್ಲಿ ನಿರ್ಧಾರದಿಂದ ಭಾರತ ತಂಡ ಈ ಪರಿಸ್ಥಿತಿಗೆ ಬಂದಿದೆ ಎಂದ ಮಾರ್ಗನ್- ಬೆಂಬಲಕ್ಕೆ ನಿಂತ ಕೊಹ್ಲಿ ಫ್ಯಾನ್ಸ್. ಕೊಹ್ಲಿ ಮಾಡಿದ ತಪ್ಪೇನು ಗೊತ್ತೇ?

Virat Kohli: ಎಲ್ಲಾ ಕ್ರೀಡೆಗಳಲ್ಲೂ ಗೆಲುವು ಸೋಲು ಎನ್ನುವುದು ಕಾಮನ್. ಒಂದು ಸಾರಿ ಸೋತರೆ, ಅದರಿಂದ ಪಾಠ ಕಲಿತು, ಮುಂದಿನ ಸಾರಿ ಚೆನ್ನಾಗಿ ಪ್ರದರ್ಶನ ನೀಡಿ ಗೆಲ್ಲುತ್ತಾರೆ. ಈ ಗೆಲುವು ಸೋಲು ಎನ್ನುವುದು ಕಾಮನ್ ಆಗಿದೆ, ಆದರೆ ಕೆಲವೊಮ್ಮೆ ತಮ್ಮ ಮೆಚ್ಚಿನ ಆಟಗಾರರು ಸೋಲುವುದನ್ನು ಅಭಿಮಾನಿಗಳು ಸಹಿಸುವುದಿಲ್ಲ..ಭಾರತ ತಂಡದ ಪರಿಸ್ಥಿತಿ ಈಗ ಅದೇ ರೀತಿ ಆಗಿದೆ. WTC ಫೈನಲ್ಸ್ ಸೋಲನ್ನು ಭಾರತ ತಂಡದ ಅಭಿಮಾನಿಗಳು ಸಹಿಸುತ್ತಿಲ್ಲ.

ಇಂಗ್ಲೆಂಡ್ ನಲ್ಲಿ ನಡೆದ ಸೋಲನ್ನು ಸಹಿಸದ ಅಭಿಮಾನಿಗಳು, ತಂಡವು ಸರಿಯಾಗಿ ಪ್ರಾಕ್ಟೀಸ್ ಮಾಡದೆ, ಐಪಿಎಲ್ ಮುಗಿದ ತಕ್ಷಣವೇ ಇಂಗ್ಲೆಂಡ್ ಗೆ ಹಾರಿತ್ತು, ಇದರಿಂದಲೇ ತಂಡವು ಗೆಲ್ಲಲು ಆಗಿಲ್ಲ. ಪದೇ ಪದೇ ಭಾರತ ತಂಡ ಎಲ್ಲಾ ಪಂದ್ಯಗಳಲ್ಲು ಸೋಲುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅಭಿಮಾನಿಗಳು ಟೀಮ್ ಇಂಡಿಯಾದ ಎಲ್ಲರನ್ನು ಈ ಸಮಯದಲ್ಲಿ ಪ್ರಶ್ನೆಯನ್ನು ಕೇಳಲು ಶುರು ಮಾಡಿದ್ದಾರೆ.. ಇದನ್ನು ಓದಿ..Pressure Cooker: ಕಡಿಮೆ ಬೆಲೆ ಕುಕ್ಕರ್ ಆದರೂ ಪರವಾಗಿಲ್ಲ, ಬೆಲೆ ಜಾಸ್ತಿ ಆದರೂ ಪರವಾಗಿಲ್ಲ- ಇವುಗಳನ್ನು ಫಾಲೋ ಮಾಡಿದರೆ, ಏನು ಆಗಲ್ಲ ಸೇಫ್ ಆಗಿ ಇರುತ್ತೆ

ಇಷ್ಟು ದೊಡ್ಡ ಲೀಗ್ ಇದ್ದಾಗ ಭಾರತ ತಂಡದ ಆಟಗಾರರು ಐಪಿಎಲ್ ನಲ್ಲಿ ಆಡಿ ನಿರ್ಲಕ್ಷ್ಯವಾಗಿ ವರ್ತಿಸಿದರು ಎಂದು ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಟೆಸ್ಟ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ರೋಹಿತ್ ಶರ್ಮಾ ಅವರು ಟೆಸ್ಟ್ ತಂಡಕ್ಕೆ ಸರಿಯಾದ ಕ್ಯಾಪ್ಟನ್ ಅಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರೋಹಿತ್ ಶರ್ಮಾ ಅವರಿಗಿಂತ ಒಳ್ಳೆಯ ಕ್ಯಾಪ್ಟನ್ ವಿರಾಟ್ ಕೊಹ್ಲಿ ಎನ್ನುವ ಮಾತುಗಳು ಕೇಳಿಬರುತ್ತಿದೆ..

ಇದೀಗ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಇಯಾನ್ ಮಾರ್ಗನ್ ಅವರು ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.. “ಟೆಸ್ಟ್ ಕ್ರಿಕೆಟ್ ತಂಡವು ಅತ್ಯುತ್ತಮವಾದ ಸ್ವರೂಪ ಆಗಿದೆ, ಈಗ ಪರಿಸ್ಥಿತಿ ದೀರ್ಘ ಸ್ವರೂಪಕ್ಕೆ ಸವಾಲು.. ಕೊಹ್ಲಿ ಅವರಂಥ ಶ್ರೇಷ್ಠ ಕ್ಯಾಪ್ಟನ್ ಅನ್ನು ಟೆಸ್ಟ್ ಕ್ರಿಕೆಟ್ ತಂಡ ಮಿಸ್ ಮಾಡಿಕೊಳ್ಳುತ್ತಿದೆ. ಅವರು ಟೆಸ್ಟ್ ತಂಡದ ಕ್ಯಾಪ್ಟನ್ಸಿ ಬಿಡುವಾಗ ಎಲ್ಲವೂ ಮುಗಿದಿಗ್ತು. ಟೆಸ್ಟ್ ಕ್ರಿಕೆಟ್ ಅಂದ್ರೆ ಕೊಹ್ಲಿ ಅವರಿಗೆ ತುಂಬಾ ಪ್ರೀತಿ.. ಅವರ ಕ್ಯಾಪ್ಟನ್ಸಿಯನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ..” ಎಂದು ಹೇಳಿದ್ದಾರೆ ಮಾರ್ಗನ್. ಇದನ್ನು ಓದಿ..AI: AI ಬಂದಾಗಿದೆ- ಇನ್ನು ಹತ್ತು ವರ್ಷಗಳಲ್ಲಿ ಪ್ರಪಂಚದಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ ಗೊತ್ತೇ? ತಿಳಿದರೇ ಮೈಂಡ್ ಬ್ಲಾಕ್ ಆಗುತ್ತದೆ.

Comments are closed.